Advertisement

Mangaluru ಫೆ. 11ರಂದು ಸಂದೇಶ ಪ್ರಶಸ್ತಿ ಪ್ರದಾನ

11:40 PM Jan 21, 2024 | Team Udayavani |

ಮಂಗಳೂರು: ಕರ್ನಾಟಕ ಪ್ರಾಂತೀಯ ಕೆಥೋಲಿಕ್‌ ಧರ್ಮಾಧ್ಯಕ್ಷರ ಮಂಡಳಿ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ಸಂದೇಶ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ 7 ಸಾಧಕರು, 1 ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಫೆ. 11ರಂದು ಸಂಜೆ 5.30ಕ್ಕೆ ನಂತೂರಿನ ಸಂದೇಶ ಪ್ರತಿಷ್ಠಾನದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ನಿರ್ದೇಶಕ ವಂ| ಡಾ| ಸುದೀಪ್‌ ಪಾಲ್‌ ಎಂಎಸ್‌ಎಫ್‌ಎಸ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಸಂದೇಶ ಸಾಹಿತ್ಯ ಪ್ರಶಸ್ತಿ ಪ್ರೊ| ಬಿ.ಎ. ವಿವೇಕ ರೈ (ಕನ್ನಡ), ವಲೇರಿಯನ್‌ ಕ್ವಾಡ್ರಸ್‌(ಕೊಂಕಣಿ), ಮುದ್ದು ಮೂಡುಬೆಳ್ಳೆ (ತುಳು), ಸಂದೇಶ ಮಾಧ್ಯಮ ಪ್ರಶಸ್ತಿ ಅಬ್ದುಸ್ಸಲಾಮ್‌ ಪುತ್ತಿಗೆ, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ ಆಲ್ವಿನ್‌ ಡಿ’ಕುನ್ಹಾ, ಸಂದೇಶ ಕಲಾ ಪ್ರಶಸ್ತಿ ಚಂದ್ರನಾಥ ಆಚಾರ್ಯ, ಸಂದೇಶ ಶಿಕ್ಷಣ ಪ್ರಶಸ್ತಿಗೆ ಹುಚ್ಚಮ್ಮ ಚೌದ್ರಿ ಆಯ್ಕೆಯಾಗಿದ್ದಾರೆ. ವಿಶೇಷ ಪ್ರಶಸ್ತಿಗೆ ಜನ ಶಿಕ್ಷಣ ಸೇವಾ ಟ್ರಸ್ಟ್‌ ಆಯ್ಕೆಯಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ಟ್ರಸ್ಟಿ ರಾಯ್‌ ಕ್ಯಾಸ್ಟಲಿನೊ ಮಾಹಿತಿ ನೀಡಿ, ಸಮಾರಂಭದ ಅಧ್ಯಕ್ಷತೆ ಯನ್ನು ಬೆಂಗಳೂರಿನ ಆರ್ಚ್‌ ಬಿಷಪ್‌ ಮತ್ತು ಕರ್ನಾಟಕ ಪ್ರಾದೇಶಿಕ ಬಿಷಪ್‌ ಸಮ್ಮೇಳನದ ಅಧ್ಯಕ್ಷ ರೈ| ರೆ| ಡಾ| ಪೀಟರ್‌ ಮಚಾದೋ ವಹಿಸಲಿದ್ದಾರೆ. ಅತಿಥಿಗಳಾಗಿ ಸ್ಪೀಕರ್‌ ಯು.ಟಿ. ಖಾದರ್‌, ಬಳ್ಳಾರಿಯ ಬಿಷಪ್‌ ಮತ್ತು ಸಂಸ್ಥೆಯ ಅಧ್ಯಕ್ಷ ರೈ| ರೆ| ಡಾ| ಹೆನ್ರಿ ಡಿ’ಸೋಜಾ, ಮಂಗಳೂರಿನ ಬಿಷಪ್‌ ರೈ| ರೆ| ಡಾ| ಪೀಟರ್‌ ಪೌಲ್‌ ಸಲ್ಡಾನ್ಹಾ, ಉಡುಪಿಯ ಬಿಷಪ್‌ ರೈ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ, ಸಂಸ್ಥೆಯ ಟ್ರಸ್ಟಿ ಫಾ| ಐವನ್‌ ಪಿಂಟೊ ಭಾಗವಹಿಸಲಿದ್ದಾರೆ ಎಂದರು.

ಆಯ್ಕೆ ಸಮಿತಿ ಅಧ್ಯಕ್ಷ ಚಿನ್ನಪ್ಪ ಗೌಡ, ಸದಸ್ಯ ಅಡ್ವಕೇಟ್‌ ಬಿ.ಎ. ಮುಹಮ್ಮದ್‌ ಹನೀಫ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next