Advertisement

ಮಂಗಳೂರು : ಸಿಸಿಬಿ ಅಧಿಕಾರಿಗಳ ದಾಳಿ, 30 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಗಾಂಜಾ ವಶ

04:23 PM Jun 30, 2021 | Team Udayavani |

ಮಂಗಳೂರು : ಮಂಗಳೂರು ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ 30 ಲಕ್ಷಕ್ಕೂ ಅಧಿಕ ಬೆಲೆ ಬಾಳುವ 1 ಕೆಜಿ 236 ಗ್ರಾಂ ಹೈಡ್ರೋವಿಡ್ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಈ ವೇಳೆ ಆರೋಪಿಗಳಾದ  ಅಜ್ಮಲ್ ಟಿ ಮಂಗಲ್ಪಾಡಿ ಮತ್ತು ಮಿನು ರಶ್ಮಿ ಎಂಬುವವರನ್ನು ಬಂಧಿಸಲಾಗಿದೆ.

Advertisement

ಬಂಧಿತ ಆರೋಪಿಗಳು ಗಾಂಜಾವನ್ನು ತರಿಸಿಕೊಂಡು ಕೊಣಾಜೆ, ಉಳ್ಳಾಲ, ಉಪ್ಪಳ ಹಾಗೂ ಮಂಗಳೂರಿನ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿ ನದೀರ್ ಎಂಬುವವನು ಕಾಸರಗೋಡು ಮೂಲದವನಾಗಿದ್ದು, ಈತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇನ್ನು ಆರೋಪಿ ರಶ್ಮಿಯು ವೈದ್ಯೆಯಾಗಿದ್ದು, ನದೀರ್ ಮತ್ತು ಅಜ್ಮಲ್ ಅವರಿಗೆ ಸ್ನೇಹಿತೆಯಾಗಿದ್ದಾಳೆ. ಅಲ್ಲದೆ ನದೀರ್ ಸ್ನೇಹಿತನಿಗೆ ಗಾಂಜಾವನ್ನು ನೀಡಲು ದೇರಳ ಕಟ್ಟೆಗೆ ಬಂದಾಗ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಕಾರು, ಮೊಬೈಲ್ ಮತ್ತು 30 ಲಕ್ಷಕ್ಕೂ ಅಧಿಕ ನಗದನ್ನು ವಶಕ್ಕೆ ಪಡೆಯಲಾಗಿದೆ. ಹರಿರಾಮ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next