Advertisement

ಮಂಗಳೂರು-ಬೆಂಗಳೂರು ರೈಲು ಯಾನ ವಿಳಂಬ

11:41 PM Aug 16, 2019 | Team Udayavani |

ಸುಬ್ರಹ್ಮಣ್ಯ: ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ರೈಲು ಓಡಾಟ ಇನ್ನೂ ಹತ್ತು ದಿನ ವಿಳಂಬವಾಗಲಿದೆ. ಎಡಕುಮೇರಿಯಿಂದ ಮುಂದಕ್ಕೆ ಗುಡ್ಡ ಜರಿದು ಹಳಿಗೆ ಹಾನಿಯಾಗಿದ್ದು, ಹಳಿ ಜೋಡಿಸುವ ಕೆಲಸ ಭರದಿಂದ ನಡೆಯುತ್ತಿದೆ. ಸುಬ್ರಹ್ಮಣ್ಯ ಕ್ರಾಸ್‌ ರೋಡ್‌-ಹಾಸನ ನಡುವಿನ ಎಡಕುಮೇರಿಯಿಂದ ಮುಂದಕ್ಕೆ 50 ಮೀ.ದೂರದಲ್ಲಿ ಅ.8ರಂದು ಗುಡ್ಡ ಕುಸಿದಿದ್ದು, ಹಳಿ ಅಡಿಭಾಗದ ಸ್ಲಿಪರ್‌ಗಳಿಗೆ ಭಾರೀ ಹಾನಿಯಾಗಿದೆ. ಹಳಿಗಳನ್ನು ಸಂಪೂರ್ಣ ಜೋಡಿಸುವ ಕೆಲಸ ನಡೆಯುತ್ತಿದೆ.

Advertisement

ಹಳಿಗಳು ಆಳಕ್ಕೆ ಜಾರಿರುವುದರಿಂದ ಕೆಳಗಿನಿಂದಲೇ ತಡೆಗೋಡೆ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಹಳಿ ಅಳವಡಿಸಿದ ಪಕ್ಕದಲ್ಲಿ ನೀರಿನ ಒರತೆಯಿದ್ದು, ಮಣ್ಣು ಆಳಕ್ಕೆ ಸರಿದಿದೆ. ಹೀಗಾಗಿ, ತಡೆಗೋಡೆ ನಿರ್ಮಾಣ ಕಷ್ಟವಾಗುತ್ತಿದೆ. ತಡೆಗೋಡೆ ನಿರ್ಮಾಣವಾದ ಬಳಿಕ ಸ್ಲಿಪರ್‌ ಜೋಡಣೆ ಆರಂಭವಾಗಬೇಕಿದೆ. ಕಾಮಗಾರಿ ಪೂರ್ಣಗೊಳ್ಳಲು ಹಲವು ದಿನ ಹಿಡಿಯಬಹುದು ಎಂದು ಹುಬ್ಬಳ್ಳಿ ವಲಯದ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next