Advertisement

ಮಂಗಳೂರು-ಬೆಂಗಳೂರು ರೈಲು ಶೀಘ್ರ ಆರಂಭ ನಿರೀಕ್ಷೆ

10:17 AM Jun 03, 2020 | sudhir |

ಪುತ್ತೂರು: ಮಂಗಳೂರು – ಬೆಂಗ ಳೂರು ನಡುವೆ ಬಸ್‌ ಸಂಚಾರ ಆರಂಭವಾಗಿದೆ. ಆದರೆ 10 ವರ್ಷ ಪ್ರಾಯದ ಕೆಳಗಿನವರು, 65 ವರ್ಷ ಪ್ರಾಯ ಮೀರಿ ದವರು ಪ್ರಯಾಣಿಸಲು ಅವಕಾಶವಿಲ್ಲ. ಆದರೆ ರೈಲುಗಳಲ್ಲಿ ಅಂತಹ ನಿಬಂಧನೆಗಳಿಲ್ಲ.ಆದ್ದರಿಂದ ಮಂಗಳೂರು-ಬೆಂಗಳೂರು ಮತ್ತು ಕಾರವಾರ-ಮಂಗಳೂರು – ಬೆಂಗಳೂರು ಪ್ರಯಾಣಿಕ ರೈಲುಗಳ ಓಡಾಟವನ್ನು ಆರಂಭಿಸಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದೆ.

Advertisement

ದೇಶಾದ್ಯಂತ ಸೀಮಿತ ಸಂಖ್ಯೆಯಲ್ಲಿ ರೈಲುಗಳ ಓಡಾಟ ಆರಂಭವಾಗಿದೆ. ಆದರೆ ನೈಋತ್ಯ ರೈಲ್ವೇಯ ಪ್ರಥಮ ಹಂತದ ಪಟ್ಟಿಯಲ್ಲಿ ಈ ರೈಲುಗಳ ಉಲ್ಲೇಖವಿಲ್ಲ. ಕರಾವಳಿಯಿಂದ ಬೆಂಗಳೂರಿಗೆ ಹೋಗಿ ಬರುವ ಪ್ರಯಾಣಿಕರು ದೊಡ್ಡ ಸಂಖ್ಯೆ ಯಲ್ಲಿರುವುದರಿಂದ ಬೇಡಿಕೆ ಬೇಗನೆ ಫ‌ಲ ನೀಡುವ ನಿರೀಕ್ಷೆ ಇದೆ.

ಲೋಕಲ್‌ ರೈಲಿಗೆ ಬೇಡಿಕೆ
ಮೀಟರ್‌ಗೇಜ್ ‌ ಕಾಲದಿಂದಲೇ ಮಂಗಳೂರು-ಕಬಕ ಪುತ್ತೂರು ಮತ್ತು ಮಂಗಳೂರು-ಕಬಕ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣಗಳ ನಡುವೆ ಲೋಕಲ್‌ ರೈಲುಗಳ ಓಡಾಟವಿತ್ತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಲೋಕಲ್‌ ರೈಲುಗಳ ಓಡಾಟವೂ ಸ್ಥಗಿತಗೊಂಡಿದೆ. ಅವುಗಳ ಓಡಾಟವನ್ನು ಆರಂಭಿಸುವಂತೆ ಕುಕ್ಕೆಶ್ರೀ ಸುಬ್ರಹ್ಮಣ್ಯ-ಮಂಗಳೂರು ರೈಲ್ವೇ ಪ್ರಯಾ ಣಿಕರ ಹಿತರಕ್ಷಣ ವೇದಿಕೆಯು ಮೈಸೂರು ವಿಭಾಗೀಯ ರೈಲ್ವೇ ಮ್ಯಾನೇಜರ್‌ಗೆ ಪತ್ರ ಬರೆದಿದ್ದು, ಸಂಸದರ ಗಮನಕ್ಕೂ ತಂದಿದೆ.

ಮಂಗಳೂರು-ಬೆಂಗಳೂರು, ಕಾರವಾರ-ಬೆಂಗಳೂರು ನಡುವಣ ರೈಲು ಸಂಚಾರವನ್ನು ಮತ್ತೆ ಆರಂಭಿಸುವಂತೆ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವರ ಗಮನಕ್ಕೆ ತರಲಾಗಿದ್ದು, ಪೂರಕ ಸ್ಪಂದನ ವ್ಯಕ್ತವಾಗಿದೆ. ಕೊರೊನಾ ಕಾರಣದಿಂದ ಏರುಪೇರಾದ ವ್ಯವಸ್ಥೆಯನ್ನು ಶೀಘ್ರ ಸರಿಪಡಿಸಲಾಗುವುದು.
– ನಳಿನ್‌ ಕುಮಾರ್‌ ಕಟೀಲು,  ದ.ಕ. ಸಂಸದ

Advertisement

Udayavani is now on Telegram. Click here to join our channel and stay updated with the latest news.

Next