Advertisement

ಮಂಗಳೂರು-ಬೆಂಗಳೂರು ಹೈಸ್ಪೀಡ್‌ ಹೆದ್ದಾರಿ ನಿರ್ಮಾಣ

11:07 AM May 27, 2017 | Harsha Rao |

ಪುತ್ತೂರು: ಕೇಂದ್ರ ಸರಕಾರದ ಭಾರತ್‌ ಮಾಲಾ ಯೋಜನೆಯಡಿ 1.18 ಲಕ್ಷ ಕೋ. ರೂ. ವೆಚ್ಚದಲ್ಲಿ ಮಂಗಳೂರು -ಬೆಂಗಳೂರು ಹೈಸ್ಪೀಡ್‌ ಹೆದ್ದಾರಿ ನಿರ್ಮಾಣವಾಗಲಿದೆ ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ.

Advertisement

ಶುಕ್ರವಾರ ಪುತ್ತೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಹೈಸ್ಪೀಡ್‌ ಹೆದ್ದಾರಿಗಳ ನಿರ್ಮಾಣದಲ್ಲಿ ಮೊದಲನೇ ಹಂತಕ್ಕೆ ನಾಲ್ಕು ಹೆದ್ದಾರಿಗಳನ್ನು ಆಯ್ಕೆ ಮಾಡಿದ್ದು, ಅವುಗಳಲ್ಲಿ ಬೆಂಗಳೂರು -ಮಂಗಳೂರು ಒಂದಾಗಿದೆ. ಮುಂಬಯಿ-ಕೋಲ್ಕತ್ತಾ, ಲೂಧಿಯಾನ-ಕಾಂಡ್ಲಾ, ಪೋರ್‌ಬಂದರ್‌-ಸಿಲ್ಚಾರ್‌ ಹೈಸ್ಪೀಡ್‌ ಹೆದ್ದಾರಿಗಳು 3.8 ಲಕ್ಷ ಕೋ.ರೂ.ಗಳಲ್ಲಿ ನಿರ್ಮಾಣವಾಗಲಿವೆ. ಉತ್ಕೃಷ್ಟ ಮಟ್ಟದ ಈ ಹೆದ್ದಾರಿಯಿಂದ 4 ಗಂಟೆಗಳಲ್ಲಿ ಮಂಗಳೂರಿನಿಂದ ಬೆಂಗಳೂರು ತಲುಪಲು ಸಾಧ್ಯವಾಗಲಿದ್ದು, 5 ವರ್ಷದ ಒಳಗೆ ಈ ಯೋಜನೆ ಸಾಕಾರಗೊಳ್ಳಲಿದೆ ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ 3 ವರ್ಷ ಪೂರೈಸುತ್ತಿದ್ದು, ವಿವಿಧ ಯೋಜನೆಗಳ ಮೂಲಕ ಜನಸಾಮಾನ್ಯರು, ಬಡವರು, ರೈತರು, ಮಹಿಳೆಯರು ಸ್ವಾಭಿಮಾನದ ಬದುಕು ನಡೆಸುವಂತೆ ವಾತಾವರಣ ಸೃಷ್ಟಿಯಾಗಿದೆ. ಅನಿವಾಸಿ ಭಾರತೀಯರೂ ಇಂದು ಹೆಮ್ಮೆಯಿಂದ ನಾವು ಭಾರತೀಯರು ಎನ್ನುತ್ತಿದ್ದಾರೆ ಎಂದರು.

ರಾಜಕೀಯ ಪರಿವರ್ತನೆ
ಜಗತ್ತಿನಲ್ಲಿ ಆರ್ಥಿಕ ಕುಸಿತ ಆದಾಗಲೂ ನೋಟು ಅಪನಗದೀಕರಣ ಮೂಲಕ ಭಾರತವನ್ನು ಆರ್ಥಿಕ ಸದೃಢತೆಗೆ ತಂದ ನರೇಂದ್ರ ಮೋದಿಯವರ ದಿಟ್ಟತನ ಎಲ್ಲರಿಗೂ ಮೆಚ್ಚುಗೆಯಾಗಿದೆ ಎಂದರು.

ಜಿಲ್ಲೆಗೆ 13 ಸಾವಿರ ಕೋ. ರೂ.
ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ 3 ವರ್ಷ ಅವಧಿಯಲ್ಲೇ ದ.ಕ. ಜಿಲ್ಲೆಗೆ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ 13 ಸಾವಿರ ಕೋ. ರೂ. ಅನುದಾನ ಲಭಿಸಿದೆ ಎಂದರು.

Advertisement

ಸಚಿವರ ಭರವಸೆ
ರೈಲ್ವೇಗೆ ಸಂಬಂಧಿಸಿ ಕುಡ್ಲ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಸೇರಿದಂತೆ 3-4 ಬೇಡಿಕೆಗಳು ಇವೆ. ಈ ಕುರಿತು ರೈಲ್ವೇ ಸಚಿವರಿಗೆ ವಿನಂತಿ ಮಾಡಲಾಗಿದ್ದು, ಅಕ್ಟೋಬರ್‌ ಅನಂತರ ಬೇಡಿಕೆಗಳನ್ನು ಈಡೇರಿಸುವುದಾಗಿ ರೈಲ್ವೇ ಸಚಿವರು ಭರವಸೆ ನೀಡಿದ್ದಾರೆ ಎಂದು ನಳಿನ್‌ ಕುಮಾರ್‌ ಕಟೀಲು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಬಿಜೆಪಿ ಪುತ್ತೂರು ನಗರ ಮಂಡಲ ಅಧ್ಯಕ್ಷ ಜೀವಂಧರ ಜೈನ್‌, ಕಾರ್ಯದರ್ಶಿ ರಾಮದಾಸ್‌ ಹಾರಾಡಿ, ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next