Advertisement

ರಥಬೀದಿ ಶ್ರೀ ವೆಂಕಟರಮಣ ದೇಗುಲ: ಅವಭೃಥ ಉತ್ಸವ 

07:04 AM Feb 14, 2019 | |

ಮಹಾನಗರ: ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಪ್ರಯುಕ್ತ ಬುಧವಾರ ಶ್ರೀ ದೇವರ ಅವಭೃಥ ಉತ್ಸವ (ಓಕುಳಿ) ನಡೆಯಿತು. ಪ್ರಾರಂಭದಲ್ಲಿ ಶ್ರೀ ದೇವರ ವಸಂತ ಮಂಟಪದಲ್ಲಿ ಅವಭೃಥ ಪೂಜೆಯ ಬಳಿಕ ಕಾಶೀ ಮಠಾಧೀಶ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಚನ ನೆರವೇರಿತು. ಸೇರಿದ್ದ ಭಕ್ತರಿಂದ ಉರುಳು ಸೇವೆ ನಡೆದು ಬಳಿಕ ಶ್ರೀ ದೇವರ 5 ಪೇಟೆಗಳ ಉತ್ಸವ ಸಾವಿರಾರು ಭಜಕರ ಪಾಲ್ಗೊಳ್ಳುವಿಕೆಯಲ್ಲಿ ನಡೆಯಿತು. ರಾತ್ರಿ ದೇವರ ಕೆರೆಯಲ್ಲಿ ಅವಭೃಥ ಸ್ನಾನ, ಧ್ವಜಾವರೋಹಣ ಮತ್ತು ಪೂಜೆ ನೆರವೇರಿತು.

Advertisement

ಅವಭೃಥ ಉತ್ಸವದ ಅಂಗವಾಗಿ ಭಕ್ತರು ಗುಲಾಬಿ ಬಣ್ಣದ ನೀರನ್ನು ಪರಸ್ಪರ ಎರಚಿ ಖುಷಿ ಪಟ್ಟರು. ಶಾಸಕ ಡಿ. ವೇದವ್ಯಾಸ ಕಾಮತ್‌, ಹೈದರಾಬಾದ್‌ನ ಉದ್ಯಮಿ ಪ್ರಕಾಶ್‌ ಪೈ, ದೇವಸ್ಥಾನದ ಮೊಕ್ತೇಸರರಾದ ಸಿ.ಎಲ್‌. ಶೆಣೈ, ರಾಮಚಂದ್ರ ಕಾಮತ್‌, ಪ್ರಶಾಂತ್‌ ರಾವ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next