Advertisement

ಮಂಡ್ಯ : ಮತ ಚಲಾಯಿಸಿ ಮನೆಗೆ ಮರಳಿ ಇಹಲೋಕ ತ್ಯಜಿಸಿದ ವ್ಯಕ್ತಿ

06:28 PM May 12, 2018 | Team Udayavani |

ಮಂಡ್ಯ : ಮತದಾನದ ಸಂದರ್ಭದಲ್ಲಿ ನಂಬಲಸಾಧ್ಯವಾದ ಘಟನೆಗಳು ನಡೆಯುವುದು ಹೊಸದೇನೂ ಅಲ್ಲ; ಆದರೆ ಅಂಥವುಗಳು ಘಟಿಸಿದಾಗೆಲ್ಲ ಜನರಲ್ಲಿ ಅಚ್ಚರಿ, ವಿಸ್ಮಯ ಉಂಟಾಗುವುದು ಸಹಜ.

Advertisement

ಈ ರೀತಿಯ ವಿಸ್ಮಯದ ಆದರೆ ವಿಷಾದಕರ ಎನಿಸುವಂತಹ ಒಂದು ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ವಡ್ಡರ ಹಳ್ಳಿ ಗ್ರಾಮದಲ್ಲಿ  ಇಂದು ಶನಿವಾರ ನಡೆದಿರುವುದು ವರದಿಯಾಗಿದೆ. 

ಮತ ಹಾಕಿ ಮನೆಗೆ ಮರಳಿದ 55 ವರ್ಷ ಪ್ರಾಯದ ತಿಮ್ಮೇಗೌಡ ಎಂಬವರು ಹಠಾತ್ತನೇ ಮೃತಪಟ್ಟ ದಾರುಣ ಘಟನೆ ನಡೆಯಿತು. ತಿಮ್ಮೇಗೌಡ ಅವರು ಅನಾರೋಗ್ಯದ ಹೊರತಾಗಿಯೂ ಮತದಾನ ಮಾಡಲೇಬೇಕೆಂಬ ಸಂಕಲ್ಪದಲ್ಲಿ ಮತಗಟ್ಟೆಗೆ ಬಂದು ತಮ್ಮ ಕರ್ತವ್ಯವನ್ನು ನಿಭಾಯಿಸಿ ಮರಳಿದ್ದರು. 

ಎಲ್ಲವೂ ಸರಿಯಾಗಿದ್ದರೂ ಮತದಾನ ಮಾಡುವ ಗೋಜಿಗೆ ಹೋಗದ ಅನೇಕ ಯುವ ಜನರಿಗೆ ತಿಮ್ಮೇಗೌಡರಿಂದ ಸ್ಫೂರ್ತಿ ಸಿಗಬೇಕಾದ ಅಗತ್ಯ ಇದೆ ಎಂದು ಜನರು ಪ್ರತಿಕ್ರಿಯಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next