Advertisement

ಮಂಡ್ಯ: ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ನಡೆಸಿರುವುದು ಅಮಾನವೀಯ: ಚವ್ಹಾಣ್

07:30 PM Dec 04, 2020 | Mithun PG |

ಮಂಡ್ಯ:  ಮದ್ದೂರಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿ, ಕೊಲೆ ಮಾಡಿದ ಘಟನೆ ಅತ್ಯಂತ ಅಮಾನವೀಯ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.

Advertisement

ತುತ್ತಿನ ಚೀಲ ತುಂಬಿಕೊಳ್ಳಲು ಬಳ್ಳಾರಿಯ ಹಗರಿಬೊಮ್ಮನಹಳ್ಳಿ  ತಾಂಡಾವೊಂದಕ್ಕೆ ಸೇರಿದ್ದ ಕುಟುಂಬ ಕಬ್ಬು ಕಡಿಯಲು ಮದ್ದೂರಿಗೆ ಬಂದು ಮಗಳನ್ನು ಕಳೆದುಕೊಂಡು ಕಣ್ಣಿರಿನಲ್ಲಿ ತೊಳೆಯುವಂತಾಗಿರುವುದನ್ನು ಕೇಳಿ ಅತೀವ ದುಖಃವಾಗಿದೆ. ನಾಗರೀಕ ಸಮಾಜ ತಲೆತಗ್ಗಿಸುವಂತ ಹೇಯ ಕೃತ್ಯವಿದು ಎಂದು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಎಸ್.ಪಿ  ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಲು ತಿಳಿಸಿದ್ದೇನೆ. ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬದ ಸದಸ್ಯನಾಗಿ, ಎಲ್ಲ ಸಹಾಯವನ್ನು ಮಾಡುತ್ತೇನೆ ಎಂದು ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

ಇದನ್ನೂ ಓದಿ:  ಮಂಸೋರೆ ನಿರ್ದೇಶನದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಘರ್ಜಿಸಲಿದ್ದಾಳೆ ‘ಅಬ್ಬಕ್ಕ’

Advertisement
Advertisement

Udayavani is now on Telegram. Click here to join our channel and stay updated with the latest news.

Next