Advertisement

ಮಂಡ್ಯ : ಕ್ಷುಲ್ಲಕ ವಿಚಾರಕ್ಕೆ ಹಾಡಹಗಲೇ ದುಷ್ಕರ್ಮಿಗಳಿಂದ ಯುವಕನ ಹತ್ಯೆ

06:34 PM Jan 25, 2021 | Team Udayavani |

ಮಂಡ್ಯ: ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನನ್ನು ಹಾಡಹಗಲೇ ದುಷ್ಕರ್ಮಿಗಳ ಗುಂಪು ಕೊಲೆ ಮಾಡಿರುವ ಘಟನೆ ಮಳವಳ್ಳಿ ಪಟ್ಟಣದ ಎನ್ಇಎಸ್ ಬಡಾವಣೆಯಲ್ಲಿ ಸೋಮವಾರ ನಡೆದಿದೆ.

Advertisement

ಪಟ್ಟಣದ ಎನ್ಇಎಸ್ ಬಡಾವಣೆಯ ನಿವಾಸಿ ಜಯಮ್ಮ ಎಂಬುವವರ ಪುತ್ರ ಶರತ್(23) ಕೊಲೆಯಾದ ಯುವಕ.
ಕಳೆದ ಒಂದು ವಾರದ ಹಿಂದೆ ಹೋಟೆಲೊಂದರಲ್ಲಿ ನಿಂತಿದ್ದ ಶರತ್ ಬಳಿ ಹುಡುಗಿಯೊಬ್ಬಳು ಬಂದು ಫೋಟೋದಲ್ಲಿದ್ದ ಯುವಕನೊಬ್ಬನ ವಿಳಾಸ ಕೇಳಿದ್ದಾಳೆ. ಈ ವೇಳೆ ಶರತ್ ಮಾಹಿತಿ ನೀಡಿದ್ದ ಎನ್ನಲಾಗಿದ್ದು, ಈ ದ್ವೇಷದ ಹಿನ್ನೆಲೆಯಲ್ಲಿ ಸೋಮವಾರ ಮನೆಯ ಬಳಿ ಬಂದ 3-4 ಮಂದಿ ದುಷ್ಕರ್ಮಿಗಳು ಶರತ್ ನನ್ನು ಆಟೋದಲ್ಲಿ ಕರೆದುಕೊಂಡು ಹೋಗಿದ್ದಾರೆ.

ಇದನ್ನು ಗಮಿಸಿದ ತಾಯಿ ಜಯಮ್ಮ ಆಟೋ ಹಿಂಬಾಲಿಸಿಕೊಂಡು ಹೋದಾಗ ಚರ್ಚ್ ಹಿಂಭಾಗದಲ್ಲಿ ದುಷ್ಕರ್ಮಿಗಳು ಮಗನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನೋಡಿ ಕಿರುಚಿಕೊಂಡಿದ್ದಾರೆ. ಈ ವೇಳೆ ಶರತ್ ನನ್ನು ಸ್ಥಳದಲ್ಲಿಯೇ ಬಿಟ್ಟು ದುಷ್ಕರ್ಮಿಗಳ ತಂಡ ಪರಾರಿಯಾಗಿದೆ.

ಇದನ್ನೂ ಓದಿ:ಬಂಗಾರ ಪಲ್ಕೆ ಜಲಪಾತದಿಂದ ಬಿದ್ದು ಮಣ್ಣಿನಡಿ ಸಿಲುಕಿದ ಯುವಕ

ಗಂಭೀರ ಹಲ್ಲೆಗೊಳಗಾದ ಶರತ್ ನನ್ನು ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ. ತೊಡೆಗೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದ ಪರಿಣಾಮ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಮೃತ ಯುವಕನ ತಾಯಿ ಜಯಮ್ಮ ಹೇಳಿದರು.

Advertisement

ಈ ಸಂಬಂಧ ಪಟ್ಟಣದ ಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪಟ್ಣಣದಲ್ಲಿ ದಿನದಿಂದ ದಿನಕ್ಕೆ ಕಳ್ಳತನ, ದರೋಡೆ ಸೇರಿದಂತೆ ಅಪರಾಧ ಪ್ರಕರಣಗಳು ಸಂಖ್ಯೆ ಹೆಚ್ಚಾಗುತ್ತಿದ್ದು, ಹಾಡಹಗಲೆ ಯುವಕ ಕೊಲೆ ನಡೆದಿರುವುದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ. ಮನೆ ಕಳ್ಳತನ, ಬೈಕ್ ಅಡ್ಡಗಟ್ಟಿ ದರೋಡೆ, ಕ್ಷುಲ್ಲಕ ವಿಚಾರಗಳಿಗೆ ಹಲ್ಲೆಗಳು ನಿರಂತರವಾಗಿ ನಡೆಯುತ್ತಿದ್ದರೂ ಕಠಿಣ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಪಟ್ಟಣದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next