Advertisement

ಮಂಡ್ಯ: ನಾಲೆಗೆ ಬಿದ್ದ ಬಸ್‌: 20ಕ್ಕೂ ಹೆಚ್ಚು ಮಂದಿಗೆ ಗಾಯ

11:15 PM Feb 18, 2023 | Team Udayavani |

ಮಂಡ್ಯ: ಗಾರ್ಮೆಂಟ್ಸ್‌ ನೌಕರರನ್ನು ಕರೆದೊಯ್ಯುವ ಬಸ್‌ ರಸ್ತೆ ಬದಿ ನಾಲೆಗೆ ಉರುಳಿ ಬಿದ್ದ ಪರಿಣಾಮ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಡಣನಾಯಕನಪುರ ಗ್ರಾಮದ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ.

Advertisement

ಘಟನೆಯಲ್ಲಿ ಚಾಲಕ ಸೇರಿ ಹಲವರಿಗೆ ಕೈ-ಕಾಲು ಮುರಿತವಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲ ಗಾಯಾಳುಗಳನ್ನು ಮಂಡ್ಯ ಮಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮಂಡ್ಯ ತಾಲೂಕಿನ ಶಿವಾರ ಮಾರ್ಗದ ನೌಕರರನ್ನು ಕರೆದೊಯ್ಯುವ ಖಾಸಗಿ ಬಸ್‌ ಆಗಿದ್ದು, ಗಾರ್ಮೆಂಟ್ಸ್‌ನಿಂದ ಕೆಲಸ ಮುಗಿಸಿ ಶಿವಾರ ಸೇರಿ ಸುತ್ತಮುತ್ತಲ ಗ್ರಾಮಕ್ಕೆ ತೆರಳುತ್ತಿದ್ದ ಬಸ್‌ ಆಯ ತಪ್ಪಿ ನಾಲೆಗೆ ಉರುಳಿ ಬಿದ್ದಿದೆ.

ನಾಲೆಯಲ್ಲಿ ಹೆಚ್ಚಾಗಿ ನೀರು ಇರದ ಪರಿಣಾಮ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ. ಕೆರಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next