Advertisement

ಗುಲಾಬಿ ಬೆಳೆದು ಲಾಭ ಕಂಡ ಮನಸೂರು ರೈತ

06:41 PM Jul 09, 2021 | Team Udayavani |

ಧಾರವಾಡ: ತಾಲೂಕಿನ ಮನಸೂರು ಗ್ರಾಮದ ರೈತ ಶಂಕ್ರಪ್ಪ ಸಿದ್ದಪ್ಪ ಅಂಗಡಿ ಅವರು ಮಹಾತ್ಮಾಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೆರವು ಪಡೆದು ತಮ್ಮ ಒಂದು ಎಕರೆ ಜಮೀನಿನಲ್ಲಿ ಗುಲಾಬಿ ಬೆಳೆದು ಸುಮಾರು 5ಲಕ್ಷ ರೂ.ಗಳಿಗೂ ಅಧಿಕ ಆದಾಯ ಪಡೆದಿದ್ದಾರೆ.

Advertisement

ಉದ್ಯೋಗ ಖಾತ್ರಿ ಯೋಜನೆಯಡಿ ಗುಲಾಬಿ ಪ್ರದೇಶ ವಿಸ್ತರಣೆಗೆ ಸಹಾಯಧನ ಹಾಗೂ ಬೆಳೆಗೆ ಕಾಲಕಾಲಕ್ಕೆ ತಾಂತ್ರಿಕ ಸಲಹೆ ನೀಡಲಾಗಿದೆ. ಮನಸೂರ-ಮನಗುಂಡಿ ಗ್ರಾಮಗಳಲ್ಲಿ ಸುಮಾರು 25-30 ರೈತ ಫಲಾನುಭವಿಗಳು ಗುಲಾಬಿ ಪ್ರದೇಶ ವಿಸ್ತರಣೆಗೆ ನರೇಗಾದಡಿ ಸಹಾಯಧನ ಪಡೆದಿರುತ್ತಾರೆಂದು ಹೋಬಳಿ ಮಟ್ಟದ ಅಧಿಕಾರಿ ಯಲ್ಲಮ್ಮ ಐರಣಿ, ತಾಂತ್ರಿಕ ಸಹಾಯಕರಾದ ತೇಜಶ್ರೀ ಒಂಟಗೋಡಿ ತಿಳಿಸಿದ್ದಾರೆ.

ಮನಗುಂಡಿ-ಮನಸೂರು ಗ್ರಾಮಗಳಲ್ಲಿ ಗುತ್ಛ ಮಾದರಿಯಲ್ಲಿ ಒಟ್ಟು 40 ಎಕರೆ ಪ್ರದೇಶದಲ್ಲಿ ಗುಲಾಬಿ ಪ್ರದೇಶ ಅನುಷ್ಟಾನಗೊಳಿಸಲಾಗಿದೆ. ಸುಮಾರು 40 ಲಕ್ಷ ರೂ. ಸಹಾಯಧನ ನೀಡಲಾಗಿದೆ. ಈ ರೈತರು ಪ್ರತಿ ವರ್ಷ ಉತ್ತಮ ಆದಾಯ ಪಡೆಯುತ್ತಿದ್ದಾರೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಯೋಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next