Advertisement

ಪೀಲ್ಡಿಗಿಳಿದು ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದ ವಾಹನಗಳ ತಪಾಸಣೆ ನಡೆಸಿದ ಎಸ್ ಪಿ

12:05 PM Jun 05, 2021 | Team Udayavani |

ಬಂಟ್ವಾಳ: ದ.ಕ ಜಿಲ್ಲಾ  ಪೋಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಅವರು ಸ್ವತಃ ಪೀಲ್ಡಿಗಿಳಿದು ವಾಹನ ತಪಾಸಣೆ ನಡೆಸಿದ ಘಟನೆ ಬಿಸಿರೋಡು ಮತ್ತು ಪರಂಗಿಪೇಟೆಯಲ್ಲಿ ನಡೆದಿದೆ.

Advertisement

ಕೋವಿಡ್ ಲಾಕ್ ಡೌನ್ ನಿಯಮ ಪಾಲನೆ ಮಾಡದೆ ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದ ವಾಹನಗಳ ತಪಾಸಣೆ ನಡೆಸಿ ಬುದ್ದಿ ಮಾತು ಹೇಳಿದ್ದಾರೆ.

ಮಾಸ್ಕ್ ಧರಿಸದೆ ಹಾಗೂ ಅನಗತ್ಯ ವಾಗಿ ತಿರುಗಾಟ ನಡೆಸುವ ವಾಹನಗಳನ್ನು ತಪಾಸಣೆ ನಡೆಸಿ ದಂಡ ವಿಧಿಸಿ ಬಿಸಿ ಮುಟ್ಟಿಸಿದ ಅವರು ಸರಕಾರದ ನಿಯಮಗಳನ್ನು ಪಾಲಿಸಿ ಎಂದು ಅವರು ವಾಹನ ಸವಾರರಿಗೆ ತಿಳಿಸಿದರು.

ಇದನ್ನೂ ಓದಿ: ಕೋವಿಡ್ ನಿಂದ ವ್ಯಕ್ತಿ ಸಾವು: ಸರಿಯಾಗಿ ಊಟ ನೀಡದೆ ಸಾಯಿಸಿದ್ದಾರೆಂದು ಸಂಬಂಧಿಕರ ಗಲಾಟೆ

ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಸರಕಾರ ನಿಯಮಗಳನ್ನು  ಮಾಡಿದ್ದಾರೆ ಪಾಲನೆ ಮಾಡುವ ಜವಬ್ದಾರಿ ಪ್ರತಿಯೊಬ್ಬ ನಾಗರೀಕನ ಮೇಲಿದೆ ಎಂಬ ಸಂದೇಶ ವಾಹನ ಸವಾರ ರಿಗೆ ದಂಡ ವಿಧಿಸುವ ಮೂಲಕ ರವಾನಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next