Advertisement

“ರೈಲಿಗೆ ಸಮಯ ಸರಣಿ ನಾವು ನಿರ್ಧರಿಸಬೇಕೇ? ‘ಕೇರಳದ ಅರ್ಜಿದಾರನಿಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ

10:27 PM Jul 17, 2023 | Team Udayavani |

ನವದೆಹಲಿ: ಕೇರಳದ ತಿರುರ್‌ ಜಿಲ್ಲೆಯಲ್ಲಿ ವಂದೇ ಭಾರತ್‌ ರೈಲು ನಿಲುಗಡೆಗೆ ಆದೇಶ ನೀಡುವಂತೆ ಕೋರಿ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದು, ಸುಪ್ರೀಂಕೋರ್ಟ್‌ ಅರ್ಜಿ ವಜಾಗೊಳಿಸಿದೆ. ಅಲ್ಲದೇ, ರೈಲು ಎಲ್ಲಿ ನಿಲ್ಲಬೇಕು, ನಿಲ್ಲಬಾರದು, ನಿಲ್ದಾಣ ಯಾವುದು ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕೇ ಎಂದು ವಕೀಲರನ್ನು ತರಾಟೆ ತೆಗೆದುಕೊಂಡಿದೆ.

Advertisement

ತಿರುರ್‌ ಜಿಲ್ಲೆಯವರೇ ಆಗಿರುವ ವಕೀಲರು ತಮ್ಮ ಜಿಲ್ಲೆಯ ಜನರಿಗೆ ಅಗತ್ಯವಿದೆ ಎನ್ನುವ ಕಾರಣಕ್ಕೆ ವಂದೇಭಾರತ್‌ ನಿಲುಗಡೆಗೆ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದರು. ಸಿಜೆಐ ಡಿವೈ ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ ಅರ್ಜಿಯನ್ನು ಆಲಿಸಿದೆ.

ಈ ವೇಳೆ ಪ್ರತಿ ಜಿಲ್ಲೆಯ ಪ್ರತಿ ವ್ಯಕ್ತಿಯೂ ತಮ್ಮ ಜಿಲ್ಲೆಗೂ ನಿಲುಗಡೆ ಬೇಕು ಎಂದು ಅರ್ಜಿ ಸಲ್ಲಿಸಿದರೆ, ಹೈಸ್ಪೀಡ್‌ ರೈಲಿನ ಉದ್ದೇಶವೇ ವ್ಯರ್ಥವಾಗುವುದಿಲ್ಲವೇ? ಜತೆಗೆ ಇಂಥ ವಿಚಾರಗಳು ರೈಲ್ವೆ ಆಡಳಿತಕ್ಕೆ ಸಂಬಂಧಿಸಿದ್ದು, ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next