Advertisement

ಮಗುವಿನ ಅಪಹರಣಕ್ಕೆ ಯತ್ನ: ಕಂಬಕ್ಕೆ ಕಟ್ಟಿ ಯುವಕನಿಗೆ ಥಳಿತ

02:34 PM Jul 21, 2022 | Team Udayavani |

ವಿಜಯಪುರ: ಕೂಲಿ ಕಾರ್ಮಿಕ ಕುಟುಂಬಕ್ಕೆ ಸೇರಿದ ನಾಲ್ಕು ವರ್ಷದ ಮಗುವನ್ನು ಅಪಹರಿಸಲು ಯತ್ನಿಸಿದ ಯುವಕನೊಬ್ಬನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ನಗರದಲ್ಲಿ ವರದಿಯಾಗಿದೆ.

Advertisement

ಬೆಳಿಗ್ಗೆ ವಿಜಯಪುರ ನಗರದ ಬಸವ ನಗರ ಪ್ರದೇಶದಲ್ಲಿ ಅಂಗಡಿಗೆ ಹೋಗಿದ್ದ ನಾಲ್ಕು ವರ್ಷದ ಗಂಡು ಮಗುವನ್ನು ಅಪಹರಣಕ್ಕೆ ಯತ್ನಿಸಿದ ಯುವಕನನ್ನು ಬೆನ್ನಟ್ಟಿದ ತಾಯಿ ಕಳ್ಳನಿಂದ ಮಗು ರಕ್ಷಿಸಿಕೊಂಡಿದ್ದಾಳೆ. ಬಳಿಕ ಮಗುವಿನ ಅಪಹರಣಕ್ಕೆ ಯತ್ನಿಸಿದವನನ್ಮು ಸ್ಥಳೀಯರ ಸಹಾಯದಿಂದ ಹಿಡಿದು, ಕಂಬಕ್ಕೆ ಕಟ್ಟಿ, ಥಳಿಸಲಾಗಿದೆ. ಸೆರೆ ಸಿಕ್ಕವನನ್ನು ವಿಚಾರಿಸಲಾಗಿ, ಹಲವು ಹೆಸರು, ವಿವಿಧ ಗ್ರಾಮಗಳ ಹೆಸರು ಹೇಳಿದ್ದಾನೆ. ಅಲ್ಲದೇ ಮಾನಸಿಕ ಅಸ್ವಸ್ಥನಂತೆ ವರ್ತಿಸಿದ್ದಾನೆ.

ನಗರದ ಹೊರವಲಯದಲ್ಲಿ ಇರುವ ಬಸವನ ನಗರ ನಿವಾಸಿಗಳಾದ ಸಂತೋಷ್ – ರೇಣುಕಾ ದಂಪತಿಯ ನಾಲ್ಕು ವರ್ಷದ ಗಂಡು ಮಗುವಿನ ಅಪಹರಣಕ್ಕೆ ಯತ್ನ ನಡೆದಿತ್ತು.

ತಿನಿಸು ತರಲು ಮಗು ಅಂಗಡಿಗೆ ಹೋಗಿದ್ದಾಗ ಮಗುವಿನ‌ ಬಾಯಿಗೆ ಬಟ್ಟೆ ತುರುಕಿ ಮಗುವನ್ನು ಹೊತ್ತೊಯ್ಯಲು‌‌ ಮುಂದಾಗಿದ್ದ. ಈ ಸಂದರ್ಭದಲ್ಲಿ ಮಗು ಕಿರುಚಾಟ ಆರಂಭಿಸಿದ್ದು, ಕೂಡಲೇ ಮನೆಯಲ್ಲಿದ್ದ ತಾಯಿ ರೇಣುಕಾ ಮಗುವಿನ ಚೀರಾಟ ಕೇಳಿ ಹೊರಗೆ ಓಡಿ ಬಂದಿದ್ದಾಳೆ.

ಇದನ್ನೂ ಓದಿ:ಆರ್ ಎಸ್ಎಸ್ ನವರು ಹಿಟ್ಲರನ್ನು ಹಾಡಿ ಹೊಗಳಿದ್ದುಇತಿಹಾಸದಲ್ಲಿದೆ : ಸಿದ್ದರಾಮಯ್ಯ

Advertisement

ಅಪರಿತ ವ್ಯಕ್ತಿ ತನ್ನ ಮಗುವನ್ನು ಹೊತ್ತೊಯ್ಯುವುದನ್ನು ಗಮನಿಸಿದ ರೇಣುಕಾ, ತಕ್ಷಣ ಆತನನ್ನು ಬೆನ್ನಟ್ಟಿ ಮಗುವಿನ ರಕ್ಷಣೆ ಮಾಡಿದ್ದಾಳೆ. ಬಳಿಕ ಸ್ಥಳೀಯರ ನೆರವಿನಿಂದ ಅಪಹರಣಕ್ಕೆ ಯತ್ನಸಿದ ಯುವಕನನ್ನು ಸೆರೆ ಹಿಡಿದು ಕಂಬಕ್ಕೆ ಕಟ್ಟಿ, ಥಳಿಸಿದ್ದಾರೆ.

ಈ ಹಂತದಲ್ಲಿ ಬಂಧಿತನ ಹೆಸರು, ವಿಳಾಸ ಕೇಳಿದಾಗ ದಾದಾಪೀರ, ಕಾಸೀಮ್, ಸಲೀಂ, ಮೈಬೂಬ್ ಎಂದೆಲ್ಲ ಹಲವು ಹೆಸರು ಹೇಳಿದ್ದು, ವಿಜಯಪುರ, ಶಿವಣಗಿ, ಕವಲಗಿ ಗ್ರಾಮದವನು ಎಂದೆಲ್ಲ ಹಲವು ಹೆಸರು ಹೇಳಿಕೊಂಡಿದ್ದಾನೆ.

ವಿಷಯ ತಿಳಿದ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next