Advertisement
ಬೆಳಿಗ್ಗೆ ವಿಜಯಪುರ ನಗರದ ಬಸವ ನಗರ ಪ್ರದೇಶದಲ್ಲಿ ಅಂಗಡಿಗೆ ಹೋಗಿದ್ದ ನಾಲ್ಕು ವರ್ಷದ ಗಂಡು ಮಗುವನ್ನು ಅಪಹರಣಕ್ಕೆ ಯತ್ನಿಸಿದ ಯುವಕನನ್ನು ಬೆನ್ನಟ್ಟಿದ ತಾಯಿ ಕಳ್ಳನಿಂದ ಮಗು ರಕ್ಷಿಸಿಕೊಂಡಿದ್ದಾಳೆ. ಬಳಿಕ ಮಗುವಿನ ಅಪಹರಣಕ್ಕೆ ಯತ್ನಿಸಿದವನನ್ಮು ಸ್ಥಳೀಯರ ಸಹಾಯದಿಂದ ಹಿಡಿದು, ಕಂಬಕ್ಕೆ ಕಟ್ಟಿ, ಥಳಿಸಲಾಗಿದೆ. ಸೆರೆ ಸಿಕ್ಕವನನ್ನು ವಿಚಾರಿಸಲಾಗಿ, ಹಲವು ಹೆಸರು, ವಿವಿಧ ಗ್ರಾಮಗಳ ಹೆಸರು ಹೇಳಿದ್ದಾನೆ. ಅಲ್ಲದೇ ಮಾನಸಿಕ ಅಸ್ವಸ್ಥನಂತೆ ವರ್ತಿಸಿದ್ದಾನೆ.
Related Articles
Advertisement
ಅಪರಿತ ವ್ಯಕ್ತಿ ತನ್ನ ಮಗುವನ್ನು ಹೊತ್ತೊಯ್ಯುವುದನ್ನು ಗಮನಿಸಿದ ರೇಣುಕಾ, ತಕ್ಷಣ ಆತನನ್ನು ಬೆನ್ನಟ್ಟಿ ಮಗುವಿನ ರಕ್ಷಣೆ ಮಾಡಿದ್ದಾಳೆ. ಬಳಿಕ ಸ್ಥಳೀಯರ ನೆರವಿನಿಂದ ಅಪಹರಣಕ್ಕೆ ಯತ್ನಸಿದ ಯುವಕನನ್ನು ಸೆರೆ ಹಿಡಿದು ಕಂಬಕ್ಕೆ ಕಟ್ಟಿ, ಥಳಿಸಿದ್ದಾರೆ.
ಈ ಹಂತದಲ್ಲಿ ಬಂಧಿತನ ಹೆಸರು, ವಿಳಾಸ ಕೇಳಿದಾಗ ದಾದಾಪೀರ, ಕಾಸೀಮ್, ಸಲೀಂ, ಮೈಬೂಬ್ ಎಂದೆಲ್ಲ ಹಲವು ಹೆಸರು ಹೇಳಿದ್ದು, ವಿಜಯಪುರ, ಶಿವಣಗಿ, ಕವಲಗಿ ಗ್ರಾಮದವನು ಎಂದೆಲ್ಲ ಹಲವು ಹೆಸರು ಹೇಳಿಕೊಂಡಿದ್ದಾನೆ.
ವಿಷಯ ತಿಳಿದ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.