Advertisement

ತುಂಬಿ ಹರಿಯುತ್ತಿರುವ ನದಿಗೆ ಮೂವರು ಪುತ್ರರನ್ನು ಎಸೆದ ಅಪ್ಪ, ಬಳಿಕ ತಾನೂ ಹಾರಿದ !

07:37 PM Aug 16, 2020 | Mithun PG |

ರಾಯಗಢ: ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನ ಮೂವರು ಗಂಡು ಮಕ್ಕಳನ್ನು ನದಿಗೆಸೆದು ಬಳಿಕ ತಾನೂ ಹಾರಿದ ಘಟನೆ ಚತ್ತಿಸ್ ಗಢದ ರಾಯಗಢದಲ್ಲಿ ನಡೆದಿದೆ ಎಂದು ವರದಿಯಾಗಿದೆ.

Advertisement

ಇಂದು ಮುಂಜಾನೆ ಈ ಘಟನೆ ನಡೆದಿದ್ದು ವ್ಯಕ್ತಿಯೊಬ್ಬ ಮಾಂಡ್ ನದಿಯ ಸೇತುವೆಯಿಂದ ತನ್ನ ಮೂವರು ಮಕ್ಕಳನ್ನು ನದಿಗೆಸೆದು ಬಳಿಕ ತಾನೂ ಹಾರಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ. ಅದಾಗ್ಯೂ ಭಾರೀ ಮಳೆ ಇರುವ ಕಾರಣದಿಂದ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ.

ನದಿಗೆ ಹಾರಿದಾತನನ್ನು ಕಾರ್ತಿಕೇಶ್ವರ ರತಿಯಾ ಎಂದು ಗುರುತಿಸಲಾಗಿದ್ದು ಎಡು ಗ್ರಾಮದವನಾಗಿದ್ದಾನೆ. ಈತ  ತನ್ನ ಪುತ್ರರಾದ ಖೀರ್‌ಸಾಗರ್ (5), ನರ್ಮದಾ (3) ಮತ್ತು ಎಂಟು ತಿಂಗಳ ತೇಜ್ ಪ್ರಕಾಶ್ ಅವರೊಂದಿಗೆ ಬೈಕ್ ನಲ್ಲಿ ಬರ್ರಾ ಗ್ರಾಮಕ್ಕೆ ತೆರಳಿದ್ದಾನೆ. ಆದರೇ ಮಾಂಡ್ ನದಿ ಸಮೀಪಿಸುತ್ತಿದ್ದಂತೆ ಬೈಕ್ ನಿಲ್ಲಿಸಿ ಮೂವರು ಮಕ್ಕಳನ್ನು ನದಿಗೆಸೆದು ಬಳಿಕ ತಾನೂ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿ ಮುಳುಗು ತಜ್ಞರು ಕಾರ್ಯಚರಣೆ ನಡೆಸುತ್ತಿದ್ದು ಇಲ್ಲಿಯವರೆಗೂ ಯಾರು ಕೂಡ ಪತ್ತೆಯಾಗಿಲ್ಲ ಎಂದು ಎನ್ ಡಿ ಟಿವಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next