Advertisement

Arasinagundi;ಜಲಪಾತದಲ್ಲಿ ಕೊಚ್ಚಿ ಹೋದ ಯುವಕ; 4ನೇ ದಿನವೂ ಮುಂದುವರಿದ ಶೋಧ ಕಾರ್ಯ

10:46 PM Jul 26, 2023 | Team Udayavani |

ಕೊಲ್ಲೂರು: ಇಲ್ಲಿನ ಅರಶಿನಗುಂಡಿ ಜಲಪಾತಕ್ಕೆ ಬಿದ್ದು ಕೊಚ್ಚಿ ಹೋದ ಭದ್ರಾವತಿಯ ಶರತ್‌ ಕುಮಾರ್‌ಗಾಗಿ ಶೋಧ ಕಾರ್ಯ ಬುಧವಾರವೂ ಮುಂದುವರಿದಿದ್ದು, ಜೂ. 26ರ ಸಂಜೆ ತನಕ ಯಾವುದೇ ಸುಳಿವು ಪತ್ತೆಯಾಗಿಲ್ಲ.

Advertisement

ಮುಳುಗು ತಜ್ಞರು, ಪೊಲೀಸ್‌ ಸಿಬಂದಿ, ಅರಣ್ಯ ಇಲಾಖೆಯ ಅಧಿಕಾರಿಗಳು 4ನೇ ದಿನವೂ ಕೂಡ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಜಡ್ಕಲ್‌ ಗ್ರಾಮದ ಕೊಳಕೆಹೊಳೆ ಮೆಕ್ಕೆ ನಿವಾಸಿ ಸುರೇಶ(28) ಅವರು ಕೂಡ ಜು. 23ರಂದು ಬೆಳಗ್ಗೆ ಮನೆಯಿಂದ ನಾಪತ್ತೆಯಾದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಇವರ ಬಗ್ಗೆಯೂ ಹುಡುಕಾಟ ನಡೆಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next