Advertisement

ಪ್ರೇಮ ಪ್ರಕರಣದಲ್ಲಿ ವ್ಯಕ್ತಿಯ ಇರಿದು ಕೊಲೆ

03:15 PM Oct 23, 2017 | udayavani editorial |

ಮುಜಫ‌ರನಗರ : ಶಾಮ್ಲಿ ಜಿಲ್ಲೆಯ ಹಸನ್‌ಪುರ ಗ್ರಾಮದಲ್ಲಿ ಯಾರೋ ಕೆಲವು ದುಷ್ಕರ್ಮಿಗಳು 26ರ ಹರೆಯದ ವ್ಯಕ್ತಿಯೋರ್ವರನ್ನು ಇರಿದು ಕೊಂದಿದ್ದು ಪ್ರೇಮ ಪ್ರಕರಣವೇ ಈ ಕೊಲೆಗೆ ಕಾರಣ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Advertisement

ದಿಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ಮೋಹಿತ್‌ ಕುಮಾರ್‌ ಎಂಬಾತ ದೀಪಾವಳಿ ಪ್ರಯುಕ್ತ ಊರಿಗೆ ಬಂದಿದ್ದ. ನಿನ್ನೆ ಭಾನುವಾರ ಆತನನ್ನು ದುಷ್ಕರ್ಮಿಗಳು ಇರಿದು ಕೊಂದರು.

ಈ ಕೊಲೆ ಸಂಬಂಧ ಐವರ ವಿರುದ್ಧ  ಕೇಸು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಥಾಣಾ ಭವನ್‌ ಪೊಲೀಸ್‌ ಎಸ್‌ಎಚ್‌ಓ ಎಂ ಎಸ್‌ ಗಿಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next