Advertisement

ಮದ್ಯದಮಲಿನಲ್ಲಿ ಹೊಡೆದಾಟ: ಗಾಯಾಳು ಸಾವು

06:29 PM Dec 08, 2022 | Team Udayavani |

ಉಪ್ಪಳ: ಮದ್ಯದ ಅಮಲಿನಲ್ಲಿ ನಡೆದ ಹೊಡೆದಾಟದಲ್ಲಿ ಗಂಭೀರ ಗಾಯಗೊಂಡು ಕಾಸರಗೋಡು ಜನರಲ್‌ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರು ನಿವಾಸಿ ಸುಂದರ (62) ಸಾವಿಗೀಡಾದರು.

Advertisement

ಐಲ ಮೈದಾನದಲ್ಲಿ ಡಿ.7 ರಂದು ಮುಂಜಾನೆ 2.30 ರ ವೇಳೆ ಈ ಘಟನೆ ನಡೆದಿದೆ. ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಶ್ರೀ ಚಕ್ರಪೂಜೆ ಹಾಗು ಶತ ಚಂಡಿಕಾ ಯಾಗ ನಡೆಯುತ್ತಿದ್ದು, ಈ ಪ್ರಯುಕ್ತ ಐಲ ಮೈದಾನದಲ್ಲಿ ಸಂತೆ ಏರ್ಪಡಿಸಲಾಗಿತ್ತು. ಇಲ್ಲಿ ಕರ್ನಾಟಕ ನಿವಾಸಿಯಾದ ಮಹಿಳೆ ಹಾಗು ಆಕೆಯ ಪುತ್ರ ಫಾಸ್ಟ್‌ ಫುಡ್‌ ವ್ಯಾಪಾರ ನಡೆಸುತ್ತಿದ್ದರು. ಬೆಂಗಳೂರು ನಿವಾಸಿ ಸುಂದರ ಹಾಗು ಮೈಸೂರು ನಿವಾಸಿ ಹರೀಶ್‌ ಕೆಲಸಕ್ಕಿದ್ದರು. ಡಿ.7 ರಂದು ಮುಂಜಾನೆ ಹರೀಶ್‌ ಹಾಗು ಸುಂದರ ಮದ್ಯದ ಅಮಲಿನಲ್ಲಿ ಹೊಡೆದಾಡಿಕೊಂಡಿದ್ದರೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಸುಂದರ ಅವರನ್ನು ಜನರಲ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಡಿ.8 ರಂದು ಬೆಳಗ್ಗೆ ಸಾವಿಗೀಡಾದರು.

ಪ್ರಿಜೇಶ್‌ ಕೊಲೆ ಪ್ರಕರಣ: ಇನ್ನೋರ್ವನ ಬಂಧನ

ಕಾಸರಗೋಡು: ತೃಕ್ಕರಿಪುರ ಮೆಟ್ಟಮ್ಮಲ್‌ ವಯಲೋಡಿ ಪರಿಶಿಷ್ಟ ಜಾತಿ ಕಾಲನಿ ನಿವಾಸಿ ಕೊಡಕ್ಕಲ್‌ ಕೃಷ್ಣನ್‌ ಅವರ ಪುತ್ರ ಪ್ರಿಜೇಶ್‌ (32) ಅವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ತೃಕ್ಕರಿಪುರ ಪೊರೋಪಾಡ್‌ ನಿವಾಸಿ ಸಫ್ವಾನ್‌(25)ನನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ.

ಈತನ ಬಂಧನದೊಂದಿಗೆ ಒಟ್ಟು ಬಂಧಿತರ ಸಂಖ್ಯೆ ಮೂರಕ್ಕೇರಿತು. ಈತನನ್ನು ಕೊಚ್ಚಿ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next