Advertisement

Bhadra Reservoir : ತೆಪ್ಪ ಮಗುಚಿ ವ್ಯಕ್ತಿ ಸಾವು

02:20 PM Aug 15, 2023 | Team Udayavani |

ಚಿಕ್ಕಮಗಳೂರು: ಮೀನು ಹಿಡಿಯಲು ಹೋದಾಗ ಭಾರೀ ಗಾಳಿಗೆ ತೆಪ್ಪ ಮಗುಚಿ ಬಿದ್ದು ಓರ್ವ ಸಾವನ್ನಪ್ಪಿ, ಇಬ್ಬರು ಪಾರಾಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ಭದ್ರಾ ಜಲಾಶಯದಲ್ಲಿ ನಡೆದಿದೆ.

Advertisement

ಮೃತನನ್ನು 40 ವರ್ಷದ ಕೃಷ್ಣ ಎಂದು ಗುರುತಿಸಲಾಗಿದೆ.

ಭದ್ರಾ ಜಲಾಶಯದಲ್ಲಿ ಕೃಷ್ಣ, ಅಜಯ್ ಹಾಗೂ ರಾಜೇಶ್ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ಬೀಸಿದ ಭಾರೀ ಗಾಳಿಯಿಂದ ಉಕ್ಕಡ ಮಗುಚಿ ಬಿದ್ದಿದೆ. ಉಕ್ಕಡ ಮಗುಚಿ ಬೀಳುತ್ತಿದ್ದಂತೆ ಅಜಯ್ ಹಾಗೂ ರಾಜೇಶ್ ಈಜಿ ದಡ ಸೇರಿದ್ದಾರೆ. ಆದರೆ, ಕೃಷ್ಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ನೀರಿನಲ್ಲಿ ಮುಳುಗುತ್ತಿದ್ದ ಕೃಷ್ಣನನ್ನ ಬದುಕಿಸಲು ರಾಜೇಶ್ ಹಾಗೂ ಅಜಯ್ ಹೋರಾಡಿದ್ದಾರೆ. ಆದರೆ, ಭಾರೀ ಗಾಳಿಗೆ ನೀರಿನ ಅಲೆಗಳು ರಭಸವಾಗಿದ್ದ ಕಾರಣ ಆತನ್ನು ಬದುಕಿಸಲು ಸಾಧ್ಯವಾಗಿಲ್ಲ.

ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಕೃಷ್ಣ ಅವರ ಮೃತದೇಹವನ್ನು ಉಡುಪಿಯ ಮಲ್ಪೆ ಮೂಲದ ಈಜು ತಜ್ಞ ಈಶ್ವರ್ ಮಲ್ಪೆ ಹಾಗೂ ತಂಡದವರು ಹುಡುಕಿ ಹೊರ ತಂದಿದ್ದಾರೆ. ಮೃತ ಕೃಷ್ಣ ಮೂಲತಃ ತರೀಕೆರೆ ತಾಲೂಕಿನವನು. ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next