Advertisement

Missing: ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ವ್ಯಕ್ತಿ ನಾಪತ್ತೆ

04:41 PM Oct 19, 2024 | Team Udayavani |

ಹಗರಿಬೊಮ್ಮನಹಳ್ಳಿ : ಪಟ್ಟಣದ ರಾಮನಗರದ ಕುರುದಗಡ್ಡಿ ಏರಿಯಾ ನಿವಾಸಿ ಭರತ್ ಎಂಬುವವರು ಅಕ್ಟೋಬರ್ 14ರಂದು ಬೆಳಗ್ಗೆ 9:00ಗೆ ತನ್ನ ಹುಟ್ಟು ಹಬ್ಬದ ನಿಮಿತ್ತ ಹಂಪಿಯ ಬಳಿ ಇರುವ ಅಂಜನಾದ್ರಿ ಬೆಟ್ಟಕ್ಕೆ ಹೋಗಿಬರುವುದಾಗಿ ಮನೆಯಲ್ಲಿ ಹೇಳಿ ಹೋಗಿ ಮರಳಿ ಬಾರದೆ ಕಾಣೆಯಾಗಿದ್ದು ಹಗರಿಬೊಮ್ಮನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕಾಣೆಯಾದ ವ್ಯಕ್ತಿಯ ಚಹರೆ ಗುರುತು :ಎತ್ತರ 5.5 ಅಡಿ ತೆಳುವಾದ ಮೈಕಟ್ಟು ದುಂಡನೆಯ ಮುಖ ಗೋದಿ ಮೈಬಣ್ಣ ಹೊಂದಿದ್ದು ಕನ್ನಡ ಭಾಷೆ ಮಾತನಾಡುತ್ತಾನೆ ಮನೆಯಿಂದ ಹೊರಡುವಾಗ ತುಂಬಾ ತೋಳಿನ ಬಿಳಿ ಅಂಗಿ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಅಥವಾ ಮಾಹಿತಿ ಸಿಕ್ಕಲ್ಲಿ ಪಿಎಸ್ಐ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 8277978190 /9480805770 ಸಿಪಿಐ ಹಗರಿಬೊಮ್ಮನಹಳ್ಳಿ, ದೂರವಾಣಿ ಸಂಖ್ಯೆ 9480805735 ಕೂಡ್ಲಿಗಿ ಡಿವೈಎಸ್ಪಿ ದೂರವಾಣಿ ಸಂಖ್ಯೆ 9480805721 ವಿಜಯನಗರ ಎಸ್ಪಿ ದೂರವಾಣಿ ಸಂಖ್ಯೆ 9480805701 ವಿಜಯನಗರ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 948080570 ಈ ಮೇಲ್ಕಂಡ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಲು ಹಗರಿಬೊಮ್ಮನಹಳ್ಳಿ ಠಾಣಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Fraud case; ಪ್ರಹ್ಲಾದ ಜೋಶಿ ಸಹೋದರ ಗೋಪಾಲ ಜೋಶಿ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next