Advertisement

ಶಂಕಿತ ಮಾದಕ ದ್ರವ್ಯ ಕಳ್ಳಸಾಗಾಟಗಾರನನ್ನು ಚಚ್ಚಿ ಕೊಂದ ಹಿಂಸೆಯಲ್ಲಿ ಪತ್ರಕರ್ತನೂ ಜಖಂ

09:58 AM Jun 09, 2019 | Team Udayavani |

ಇಂಫಾಲ : ಮಾದಕ ದ್ರವ್ಯ ಕಳ್ಳಸಾಗಾಟಗಾರನೆಂಬ ಶಂಕೆಯಲ್ಲಿ ಮೊಹಮ್ಮದ್‌ ಹೆಲಿಮ್‌ ಎಂಬ ವ್ಯಕ್ತಿಯನ್ನು ದ್ರವ್ಯ ವಿರೋಧಿ ಸಂಘಟನೆಯ ಸದಸ್ಯರು ಚಚ್ಚಿ ಕೊಂದ ಘಟನೆ ಮಣಿಪುರದ ಇಂಫಾಲ ಪೂರ್ವ ಜಿಲ್ಲೆಯಲ್ಲಿ ನಡೆದಿದೆ.

Advertisement

ಈ ಘಟನೆಯಿಂದ ಆಕ್ರೋಶಗೊಂಡ ಗುಂಪೊಂದು ಸಂಘಟನೆಯ ಕಚೇರಿ ಮತ್ತು ಅದರ ಅಧ್ಯಕ್ಷ ಮೊಹಮ್ಮದ್‌ ಅಜೀಮುದ್ದೀನ್‌ ಅವರ ನಿವಾಸದ ಮೇಲೆ ದಾಳಿ ಮಾಡಿ ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಡಿದ ಘಟನೆ ಕೂಡ ವರದಿಯಾಗಿದೆ.

ಉದ್ರಿಕ್ತರ ಈ ದುಂಡಾವರ್ತಿಯಲ್ಲಿ ಕರ್ತವ್ಯ ನಿರತ ಓರ್ವ ಪತ್ರಕರ್ತನ ಮೇಲೂ ದಾಳಿ ನಡೆಯಿತೆಂದು ಪೊಲೀಸರು ತಿಳಿಸಿದ್ದಾರೆ.

ದ್ರವ್ಯ ವಿರೋಧಿ ಜಂಟಿ ಸಮಿತಿಯ ಸದಸ್ಯರು ಗುರುವಾರ ತಡ ರಾತ್ರಿ ಮೊಹಮ್ಮದ್‌ ಹೆಲಿಮ್‌ ಎಂಬಾತನನ್ನು ಮಾದಕ ದ್ರವ್ಯ ಕಳ್ಳಸಾಗಾಟಗಾರನೆಂದು ಶಂಕಿಸಿ ಆತನನ್ನು ಚಚ್ಚಿ ಸಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next