Advertisement

ಬಸ್‌ ಢಿಕ್ಕಿಯಾಗಿ ವ್ಯಕ್ತಿ ಸಾವು: ಚಾಲಕನಿಗೆ 6 ತಿಂಗಳು ಜೈಲು ಶಿಕ್ಷೆ

07:25 PM Apr 28, 2023 | Team Udayavani |

ಮಂಗಳೂರು: ಬಸ್‌ ಢಿಕ್ಕಿಯಾಗಿ ವ್ಯಕ್ತಿಯೋರ್ವರು ಮೃತಪಟ್ಟ ಪ್ರಕರಣದಲ್ಲಿ ಮಂಗಳೂರಿನ ನ್ಯಾಯಾಲಯವು ಬಸ್‌ ಚಾಲಕನಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಬಸ್‌ ಚಾಲಕ ಕೃಷ್ಣಾಪುರ ಕಾಟಿಪಳ್ಳ 7ನೇ ಬ್ಲಾಕ್‌ನ ನಿವಾಸಿ ಉಸ್ಮಾನ್‌(37) ಶಿಕ್ಷೆಗೊಳಗಾದ ಆರೋಪಿ. ಘಟನೆಯಲ್ಲಿ ಸುಂದರ್‌ ಸಾಲಿಯಾನ್‌ ಮೃತಪಟ್ಟಿದ್ದರು.

Advertisement

ಪ್ರಕರಣದ ವಿವರ
2020ರ ಜ.16ರಂದು ಬೆಳಗ್ಗೆ 10.20ಕ್ಕೆ ಸುಂದರ್‌ ಸಾಲಿಯಾನ್‌ ಅವರು ಬೈಕಂಪಾಡಿ ಜಂಕ್ಷನ್‌ ಬಳಿ ಬಸ್‌ ನಿಲ್ದಾಣದ ಎದುರು ಬಸ್‌ಗಾಗಿ ಕಾಯುತ್ತಿದ್ದರು. ಆಗ ಜೋಕಟ್ಟೆ ಕ್ರಾಸ್‌ ಕಡೆಯಿಂದ ಉಸ್ಮಾನ್‌ ಎಂಬಾತ ಅಪಾಯಕಾರಿ ರೀತಿಯಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡ ಬಂದ ಸಿಟಿಬಸ್‌ ಸಂದರ್‌ ಅವರಿಗೆ ಢಿಕ್ಕಿ ಹೊಡೆದು ಬಸ್‌ನ ಎದುರಿನ ಎಡಬದಿಯ ಚಕ್ರ ಅವರ ಎಡಬದಿಯ ಕಾಲು ಮತ್ತು ಸೊಂಟದ ಮೇಲೆ ಹಾದು ಹೋಗಿ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದರು. ಈ ಬಗ್ಗೆ ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖಾಧಿಕಾರಿಯಾಗಿದ್ದ ಮಂಗಳೂರು ನಗರದ ಪೊಲೀಸ್‌ ಇನ್ಸ್‌ಪೆಕ್ಟರ್‌ ಮೋಹನ್‌ ಕೊಟ್ಟಾರಿ ಅವರು 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸಾಕ್ಷಿ ವಿಚಾರಣೆ ನಡೆಸಿದ ಜೆಎಂಎಫ್ಸಿ 2ನೇ ನ್ಯಾಯಾಲಯದ ನ್ಯಾಯಾಧೀಶೆಯಾದ ಅಂಜಲಿ ಶರ್ಮಾ ಅವರು ಆರೋಪಿ ಉಸ್ಮಾನ್‌ ಮೇಲಿನ ಆರೋಪಣೆ ಸಾಬೀತಾಗಿರುವುದರಿಂದ ಆತನಿಗೆ 6 ತಿಂಗಳ ಕಾಲ ಸಾದಾ ಶಿಕ್ಷೆ ಹಾಗೂ ರೂ.6,000 ರೂ. ದಂಡ ವಿಧಿ ಸಿ ಎ.27ರಂದು ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ 3 ತಿಂಗಳು, 10 ದಿನಗಳ ಕಾಲ ಸಾದಾ ಶಿಕ್ಷೆ ಅನುಭವಿಸಲು ಆದೇಶ ನೀಡಿದ್ದಾರೆ.

ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಗೀತಾ ರೈ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next