Advertisement

ಆಧಾರ್ ತಿದ್ದುಪಡಿಗೆ ಆಗ್ರಹಿಸಿ ರಾಜನಾಥ್‌ ಸಿಂಗ್‌ ವಾಹನಕ್ಕೆ ಅಡ್ಡ ಮಲಗಿದ ಭೂಪ!

09:39 AM Dec 04, 2019 | Hari Prasad |

ಹೊಸದಿಲ್ಲಿ: 35 ವರ್ಷದ ವ್ಯಕ್ತಿಯೊಬ್ಬರು ಮಂಗಳವಾರ ಸಂಸತ್‌ನ ರಸ್ತೆ ಬಳಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ರ ಬೆಂಗಾವಲು ಪಡೆಯ ವಾಹನಗಳು ಬರುವ ವೇಳೆ ರಸ್ತೆಯಲ್ಲಿ ಅಡ್ಡ ಮಲಗಿದ್ದು, ಆಧಾರ್‌ ಗುರುತಿನ ಚೀಟಿಯಲ್ಲಿ ತಮ್ಮ ಹೆಸರನ್ನು ಬದಲಾಯಿಸುವಂತೆ ಆಗ್ರಹಿಸಿದ್ದಾರೆ. ಅವರು ಮಾನಸಿಕ ಅಸ್ವಸ್ಥರು ಎಂದು ಶಂಕಿಸಲಾಗಿದೆ.

Advertisement

ವ್ಯಕ್ತಿಯನ್ನು ಉತ್ತರ ಪ್ರದೇಶದ ಕುಶಿನಗರ ನಿವಾಸಿ ವಿಶಂ ಬರ್‌ ದಾಸ್‌ ಗುಪ್ತಾ ಎಂದು ಗುರುತಿಸಲಾಗಿದೆ. ಮಧ್ಯಾಹ್ನ 1:25 ವೇಳೆಗೆ ಅವರು ರಸ್ತೆ ಮೇಲೆ ಮಲಗಿ, ಆಧಾರ್‌ ಕಾರ್ಡ್‌ನಲ್ಲಿ ಹೆಸರು ಬದಲಿಸಬೇಕಿದೆ. ನನ್ನನ್ನು ಪ್ರಧಾನಿ ಮೋದಿ ಬಳಿ ಕರೆದುಕೊಂಡು ಹೋಗಿ ಎಂದು ಕೇಳುತ್ತಿದ್ದರು. ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next