Advertisement

ಜಿಲ್ಲಾಧಿಕಾರಿ ಕಚೇರಿ ಎದುರೇ ದಂತ ವೈದ್ಯನಿಗೆ ಚೂರಿ ಇರಿತ: ಆರೋಪಿ ವಶಕ್ಕೆ

01:29 PM Mar 09, 2021 | Team Udayavani |

ಕಲಬುರಗಿ: ಹಾಡುಹಗಲೇ ದಂತ ವೈದ್ಯರೊಬ್ಬರಿಗೆ ಚೂರಿ ಇರಿದಿರುವ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ನಡೆದಿದೆ. ಆರೋಪಿ ಶ್ರೀನಿವಾಸ ಎಂಬುವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಡಾ.ವಿಶ್ವನಾಥ್ ಪಾಟೀಲ್ ಎಂಬಾತನೇ ಚಾಕು ಇರಿತಕ್ಕೊಳಗಾದ ವೈದ್ಯ. ಇವರು ಸಿದ್ದಗಂಗಾ ಡೆಂಟಲ್ ಆಸ್ಪತ್ರೆಯನ್ನು ಹೊಂದಿದ್ದಾರೆ.‌ ಆರೋಪಿ ಸುರಪುರ ಮೂಲದ ಶ್ರೀನಿವಾಸ ಈ ಹಿಂದೆ ದಂತ ಚಿಕಿತ್ಸೆ ಪಡೆದಿದ್ದ ಎನ್ನಲಾಗಿದೆ.

ಇದನ್ನೂ ಓದಿ:ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಕುಸಿದು ಬಿದ್ದು ಸಾವು!

ಮಂಗಳವಾರ ಬೆಳಗ್ಗೆ ರಸ್ತೆ ಬದಿ ಕಾರು ನಿಲ್ಲಿಸಿ ಆಸ್ಪತ್ರೆಯೊಳಗೆ ಹೋಗುತ್ತಿದ್ದಾಗ ಆರೋಪಿ ಶ್ರೀನಿವಾಸ ಹೊಟ್ಟೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಆದರೆ, ಚಾಕು ಇರಿತಕ್ಕೆ ನಿಖರ ಕಾರಣ ಗೊತ್ತಾಗಿಲ್ಲ.

Advertisement

ಸದ್ಯ ಗಾಯಾಳು ವೈದ್ಯ ಡಾ.ವಿಶ್ವನಾಥ್ ಪಾಟೀಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಶ್ರೀನಿವಾಸ ಸ್ಟೇಷನ್ ಬಜಾರ್ ಠಾಣೆ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next