Advertisement

Andhra Pradesh; ಇದ್ದಿದ್ದು 17 ರೂ., 100 ಕೋ.ರೂ. ಚೆಕ್‌ ಹುಂಡಿಗೆ ಕಾಣಿಕೆ!

12:22 AM Aug 26, 2023 | Team Udayavani |

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣದ ಸಿಂಹಾಚಲಂ ದೇವಸ್ಥಾನಕ್ಕೆ ಬರೋಬ್ಬರಿ 100 ಕೋಟಿ ರೂ. ದೇಣಿಗೆಯ ಚೆಕ್‌ ಅನ್ನು ಭಕ್ತನೊಬ್ಬ ಹುಂಡಿಗೆ ಹಾಕಿದ್ದಾನೆ. ಆದರೆ ದೇಗುಲದ ಅಧಿಕಾರಿಗಳು ಅದನ್ನು ಬ್ಯಾಂಕಿಗೆ ಹಾಕಿದಾಗ, ಆ ಭಕ್ತನ ಖಾತೆಯಲ್ಲಿ ಕೇವಲ 17 ರೂ. ಇರುವುದು ಪತ್ತೆಯಾಗಿದೆ.

Advertisement

ದೊಡ್ಡ ಮೊತ್ತದ ಚೆಕ್‌ ಕಂಡು ಖುಷಿಯಾಗಿದ್ದ ಅಧಿಕಾರಿಗಳಿಗೆ, ಭಕ್ತನ ಬ್ಯಾಂಕ್‌ ಖಾತೆಯಲ್ಲಿ ಕನಿಷ್ಠ ಬಾಕಿ ಮೊತ್ತ ಕೂಡ ಇಲ್ಲದಿರುವುದನ್ನು ಕಂಡು ನಿರಾಶೆಯಾಗಿದೆ. ಬುಧವಾರ ಹುಂಡಿ ಎಣಿಕೆ ಕಾರ್ಯದ ಸಮಯದಲ್ಲಿ ಈ ಚೆಕ್‌ ಸಿಕ್ಕಿದೆ. ಬೊಡ್ಡೆಪಲ್ಲಿ ರಾಧಾಕೃಷ್ಣ ಎಂಬುವವರು ಖಾಸಗಿ ಬ್ಯಾಂಕ್‌ನ ಚೆಕ್‌ ಅನ್ನು ಹುಂಡಿಗೆ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next