Advertisement

Video: ಜಮೀನು ವಿವಾದ; ಯುವಕನ ಮೇಲೆ ಟ್ರ್ಯಾಕ್ಟರ್‌ ಹರಿಸಿ ಹತ್ಯೆ

02:59 PM Oct 25, 2023 | Team Udayavani |

ಜೈಪುರ: ಜಮೀನು ವಿವಾದ ತಾರಕಕ್ಕೇರಿದ ಪರಿಣಾಮ ಯುವಕನ ಮೇಲೆ ಟ್ರ್ಯಾಕ್ಟರ್‌ ಹರಿಸಿ ಹತ್ಯೆಗೈದಿರುವ ಘಟನೆ ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ನಡೆದಿದೆ.

Advertisement

ನಿರ್ಪತ್ ಗುರ್ಜರ್ ಎನ್ನುವ ಯುವಕನನ್ನು ಟ್ರ್ಯಾಕ್ಟರ್‌ ಹರಿಸಿ ಭೀಕರವಾಗಿ ಹತ್ಯೆಗೈಯಲಾಗಿದೆ.

ಕಳೆದ ಅನೇಕ ವರ್ಷದಿಂದ ಅಡ್ಡಾ ಗ್ರಾಮದಲ್ಲಿ ಬಹದ್ದೂರ್ ಗುರ್ಜರ್ ಮತ್ತು ಅತಾರ್ ಸಿಂಗ್ ಗುರ್ಜರ್ ಅವರ ಕುಟುಂಬದ ನಡುವೆ ಜಮೀನು ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರವಾಗಿ ಬುಧವಾರ ಮುಂಜಾನೆ ಎರಡೂ ಕುಟುಂಬಗಳ ನಡುವೆ ಮಾತಿನ ಚಕಮಕಿ ಉಂಟಾಗಿದೆ.

ಮಾತು ಹಲ್ಲೆ ನಡೆಸುವ ಮಟ್ಟಕ್ಕೆ ಬೆಳೆದಾಗ ಬಹದ್ದೂರ್ ಗುರ್ಜರ್ ಜೊತೆಗಿದ್ದ ಸಹಚರನೊಬ್ಬ ಸೀದಾ ಟ್ರ್ಯಾಕ್ಟರ್‌ ನ್ನು ಅತಾರ್ ಸಿಂಗ್ ಅವರ ಮಗ ನಿರ್ಪತ್ ಗುರ್ಜರ್ ಮೇಲೆ ಹರಿಸಿದ್ದಾನೆ. ಎರಡೂ ಮೂರು ಟ್ರ್ಯಾಕ್ಟರ್‌ ಹರಿಸಿದ ಪರಿಣಾಮ ನಿರ್ಪತ್ ಗುರ್ಜರ್ ಕೊನೆಯುಸಿರೆಳೆದಿದ್ದಾನೆ.

ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗ್ರಾಮಸ್ಥರು ನೀಡಿದ ಮಾಹಿತಿಯ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

ಇನ್ನೊಂದೆಡೆ ಈ ಘಟನೆ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದ್ದು, ಬಿಜೆಪಿ ಪ್ರಿಯಾಂಕ ಗಾಂಧಿ ಅವರು ಈಗ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next