Advertisement

ಮುಂಬಯಿ ಆಸ್ಪತ್ರೆಯ 8ನೇ ಮಹಡಿಯಿಂದ ಹಾರಿ ರೋಗಿ ಆತ್ಮಹತ್ಯೆ

03:11 PM Jul 24, 2017 | Team Udayavani |

ಮುಂಬಯಿ : ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದ 56 ವರ್ಷ ಪ್ರಾಯದ, ನಗರ ಹೊರವಲಯದ ಜೋಗೇಶ್ವರಿಯ ನಿವಾಸಿ, ರಾಮ್‌ಸಿಂಗ್‌ ಜೈಸ್ವಾಲ್‌ ಎಂಬವರು ಇಂದು ಅಂಧೇರಿಯಲ್ಲಿನ ಆಸ್ಪತ್ರೆ ಕಟ್ಟಡದ ಎಂಟನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಯಶಸ್ವೀ ಬೈಪಾಸ್‌ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಚೇತರಿಸಿಕೊಳ್ಳುತ್ತಿದ್ದ ಜೈಸ್ವಾಲ್‌ ಅವರ ಆತ್ಮಹತ್ಯೆಗೆ ಏನು ಕಾರಣ ಎಂಬುದು ಇನ್ನೂ ತಿಳಿದುಬಂದಿಲ್ಲ.

ಅಂಧೇರಿಯ ಎಂಐಡಿಸಿ ಪೊಲೀಸ್‌ ಠಾಣಾಧಿಕಾರಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next