Advertisement

Haveri; ಹಸು ಮೈ ತೊಳೆಯಲು ನದಿಗೆ ಇಳಿದ ಯುವಕ ನೀರುಪಾಲು

04:30 PM Jul 11, 2024 | Team Udayavani |

ಹಾವೇರಿ: ಹಸು ಮೈತೊಳೆಯಲೆಂದು ನದಿಗೆ ಇಳಿದ ಯುವಕ ನೀರುಪಾಲಾದ ಘಟನೆ ಹಾವೇರಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ನಡೆದಿದೆ.

Advertisement

ಗಾಳೆಪ್ಪ ಮೇಲಿನಮನಿ (25) ನೀರುಪಾಲದ ಯುವಕ. ಈತ ವರದಾ ನದಿಗೆ ಹಸು ಮೈ ತೊಳೆಯಲು ಹೋಗಿದ್ದ ವೇಳೆ ಘಟನೆ ನಡೆದಿದೆ.

ಮಲೆನಾಡಲ್ಲಿ ಮಳೆ ಹೆಚ್ಚಾದ ಪರಿಣಾಮ ನದಿಯಲ್ಲಿ ನೀರು ಹೆಚ್ಚಾಗಿತ್ತು. ಯುವಕನಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಡುತ್ತಿದ್ದಾರೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next