Advertisement

ಅಕ್ರಮ ಮದ್ಯ ಸೇವಿಸಿ ವ್ಯಕ್ತಿ ಸಾವು

06:08 PM Aug 23, 2019 | Team Udayavani |

ನೆಲಮಂಗಲ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಮಹಿಳೆಯರು ಅಕ್ರಮ ಮದ್ಯಮಾರಾಟ ನಿಲ್ಲಿಸಬೇಕು ಎಂದು ಆಗ್ರಹಿಸಿದ ಮೂರೇದಿನದಲ್ಲಿ ವ್ಯಕ್ತಿಯೊಬ್ಬ ಬಲಿಯಾಗಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

Advertisement

ತಾಲೂಕಿನ ಸೋಲದೇವನಹಳ್ಳಿ ಗ್ರಾಮದ ರಾಜಣ್ಣ(36) ಮದ್ಯಪಾನದಿಂದ ಮೃತಪಟ್ಟಿರುವ ವ್ಯಕ್ತಿ. ಗ್ರಾಮದ ಚಿಲ್ಲರೆ ಅಂಗಡಿಯಲ್ಲಿ ಮಾರುವ ಅಕ್ರಮ ಮದ್ಯ ಸೇವಿಸಿ ಮರಣ ಹೊಂದಿದ್ದಾನೆಂದು ತಿಳಿದು ಬಂದಿದ್ದು ಅಕ್ರಮ ಮದ್ಯ ನಿಲ್ಲಿಸಬೇಕು ಎಂದು ಸೋಲ ದೇವನಹಳ್ಳಿ ಗ್ರಾಪಂ ಕಾರ್ಯಾಲಯದ ಎದುರು ಗ್ರಾಮಸ್ಥರು ಮೃತನ ಶವವಿಟ್ಟು ಪ್ರತಿಭಟನೆ ಮಾಡಿದರು.

ಭರವಸೆ:ಪೊಲೀಸರ ಜನಸಂಪರ್ಕ ಸಭೆಯಲ್ಲಿ ಮಹಿಳೆಯರ ಆಗ್ರಹಕ್ಕೆ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್‌ ಅಕ್ರಮ ಮದ್ಯ ಮಾರಾಟ ನಿಲ್ಲಿಸುವ ಭರವಸೆ ನೀಡಿದರು. ಈಗ ಸೋಲದೇ ವನಹಳ್ಳಿ ಪಿಡಿಒ ಅಂಗಡಿ ತೆರವುಗೊಳಿಸಿ ಸೂಕ್ತಕ್ರಮಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಆದರೆ ಮದ್ಯಮಾರಾಟಕ್ಕೆ ಸಂಬಂಧಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತಿದ್ದು ಸಮಸ್ಯೆ ಬಗೆಹರಿಸಿ ರಾಜಣ್ಣನ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next