Advertisement

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಆಗ್ರಹಿಸಿ ಟವರ್‌ ಏರಿ ಕುಳಿತ ಭೂಪ

04:22 PM Jul 27, 2018 | Team Udayavani |

ಹೊಸದಿಲ್ಲಿ : ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡಬೇಕು ಎಂದು ಆಗ್ರಹಿಸುವ ಬ್ಯಾನರ್‌ ಹಿಡಿದುಕೊಂಡ ವ್ಯಕ್ತಿಯೋರ್ವ ಇಂದು ಶುಕ್ರವಾರ ಇಲ್ಲಿನ ಮೆಟ್ರೋ ಭವನ್‌ ಸಮೀಪದ ಭಾರೀ ಎತ್ತರದ ಟವರ್‌ ಏರಿ ಕುಳಿತು ಪೊಲೀಸರಲ್ಲಿ ಆತಂಕ ಸೃಷ್ಟಿಸಿದ್ದಾನೆ. 

Advertisement

ರಾಜಧಾನಿಯಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿರುವ ನಡುವೆಯೇ ಈ ವ್ಯಕ್ತಿ ಮಾಡಿರುವ ಈ ಕಾರುಬಾರು ಎಲ್ಲರನ್ನೂ ಚಕಿತಗೊಳಿಸಿದೆ. ಗೋಪುರದ ಮೇಲ್ಭಾಗವು ಜಾರುವಂತಿರುವ ಕಾರಣ ಈ ವ್ಯಕ್ತಿ ತನ್ನ ಜೀವವನ್ನೇ ಅಪಾಯಕ್ಕೆ ಗುರಿಮಾಡಿರುವುದು ಪೊಲೀಸರಲ್ಲಿ ಆತಂಕ ಸೃಷ್ಟಿಸಿದೆ. 

ಪೊಲೀಸರು ಸ್ಥಳಕ್ಕೆ ಧಾವಿಸಿ ಟವರ್‌ ಏರಿರುವ ವ್ಯಕ್ತಿಯನ್ನು ಕೆಳಗಿಳಿಯುವಂತೆ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next