Advertisement

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

01:33 PM Jun 19, 2021 | Team Udayavani |

ಬೆಳಗಾವಿ: ನಿಪ್ಪಾಣಿ ತಾಲೂಕಿನ ಅಕ್ಕೋಳ-ಸಿದ್ನಾಳ ಗ್ರಾಮದ ಬಳಿಯ ವೇದ ಗಂಗಾ ನದಿಯಲ್ಲಿ ಕಾಲು ಜಾರಿ ಬಿದ್ದ ಯುವಕನೋರ್ವ ನದಿ ಮಧ್ಯ ಭಾಗದ ಗಿಡದ ಮೇಲೆ ಕುಳಿತುಕೊಂಡಿದ್ದು, ಯುವಕನ ರಕ್ಷಣಾ ಕಾರ್ಯ ಮುಂದುವರಿದಿದೆ.

Advertisement

ಸಿದ್ನಾಳ ಗ್ರಾಮದ ದಿಗ್ವಿಜಯ ಕುಲಕರ್ಣಿ ಎಂಬ ಯುವಕ ಅಕ್ಕೋಳ-ಸಿದ್ನಾಳ ಬ್ರಿಡ್ಜ್‌ ಬಳಿಯ ಗಿಡಕ್ಕೆ ಹೋಗಿ ಸಿಲುಕಿಕೊಂಡಿದ್ದಾನೆ. ನದಿಯಲ್ಲಿ ಕಾಲು ಜಾರಿ ಬಿದ್ದು ನದಿಯ ಮಧ್ಯದಲ್ಲಿರುವ ಗಿಡವನ್ನು ಹಿಡಿದುಕೊಂಡು ಕುಳಿತಿದ್ದಾನೆ.

ಇದನ್ನೂ ಓದಿ:ಮೆಡಿಕಲ್ ಕಾಲೇಜಿಗೆ KPSTA ಕುಂಬಳ ಉಪಜಿಲ್ಲಾ ವತಿಯಿಂದ ಜೀವರಕ್ಷ ಮೆಡಿಸಿನ್ ಕಿಟ್ ಹಸ್ತಾಂತರ

ಕೂಡಲೇ ಸ್ಥಳೀಯರು ಈತನ ರಕ್ಷಣೆಗೆ ಮುಂದಾಗಿದ್ದಾರೆ. ಪೊಲೀಸರು, ಎನ್ ಡಿಆರ್ ಎಫ್, ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿದಿದೆ. ಯುವಕನ ರಕ್ಷಣೆಗೆ ಪರದಾಟ ನಡೆದಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಯುವಕನನ್ನು ರಕ್ಷಿಸಲಾಗುವುದು ಎಂದು ನಿಪ್ಪಾಣಿ ತಹಶೀಲ್ದಾರ ಪ್ರಕಾಶ ಗಾಯಕವಾಡ ‘ಉದಯವಾಣಿ’ಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next