Advertisement

ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಸೆರೆ

09:06 PM Jan 12, 2022 | Team Udayavani |

ಇಂಡಿ: ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಇಂಡಿ ನಗರ ಪೊಲೀಸರು ಬಂಧಿ ಸಿ, 7 ದ್ವಿಚಕ್ರ ವಾಹನ ವಶಕ್ಕೆ ಪಡೆದ ಘಟನೆ ಸೋಮವಾರ ನಡೆದಿದೆ. ಬಂ ಧಿತನನ್ನು ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೌಡಗಾಂವ ಗ್ರಾಮದ ಅನಿಲ ಹಣಮಂತ ಕ್ಷತ್ರಿ(21)ಎಂದು ಗುರುತಿಸಲಾಗಿದೆ.

Advertisement

ಎಎಸ್‌ಐ ವಿ.ಪಿ. ಸಂತರ್‌ ಹಾಗೂ ಸಿಬ್ಬಂದಿ ಪಟ್ಟಣದ ಅಗರಖೇಡ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಆರೋಪಿತನು ಅಗರಖೇಡ ಕಡೆಯಿಂದ ಇಂಡಿ ನಗರಕ್ಕೆ ಬರುತ್ತಿದ್ದ ಪೊಲೀಸರನ್ನು ನೋಡಿ ದ್ವಿಚಕ್ರವಾಹನ ಮರಳಿ ಅಗರಖೇಡದ ಕಡೆ ಹೊರಳಿಸಿದ್ದಾನೆ.

ಪೊಲೀಸರು ಆತನನ್ನು ನಿಲ್ಲಿಸಿ ವಾಹನದ ದಾಖಲಾತಿ ಕೇಳುತ್ತಿದ್ದಂತೆ ಆರೋಪಿತ ಗಾಬರಿಗೊಂಡು ಸಮರ್ಪಕ ಉತ್ತರ ನೀಡದಿದ್ದಾಗ ಪೊಲೀಸರು ಆತನನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದಾಗಿ ಒಟ್ಟು 7 ಬೈಕ್‌ ಕಳ್ಳತನ ಮಾಡಿರುವುದನ್ನು ಒಪ್ಪಿದ್ದಾನೆ. ಇಂಡಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next