Advertisement

ಗಾಂಜಾ ಮಾರಾಟಕ್ಕೆ ಯತ್ನ:  ಆರೋಪಿ ಸೆರೆ; ಸೊತ್ತು ವಶ

10:12 AM Oct 31, 2017 | Team Udayavani |

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಕಿನ್ನಿಕಂಬಳದ ಮಹಮ್ಮದ್‌ ಶಾಕೀರ್‌ (23) ನನ್ನು ಮಂಗಳೂರು ಕೇಂದ್ರ ಉಪವಿಭಾಗದ ರೌಡಿ ನಿಗ್ರಹದಳದ ಮತ್ತು ಉರ್ವ ಠಾಣೆಯ ಪೊಲೀಸರು ಸೋಮವಾರ ನಗರದ ಕೋಡಿಕಲ್‌ 10ಬಿ ಕ್ರಾಸ್‌ನಲ್ಲಿ ಬಂಧಿಸಿ 1.80 ಕೆ.ಜಿ ಗಾಂಜಾ, 2 ಮೊಬೈಲ್‌ ಫೋನ್‌, ಬಜಾಜ್‌ ಪಲ್ಸರ್‌ ಬೈಕ್‌ ಮತ್ತು ನಗದು ಸೇರಿದಂತೆ ಒಟ್ಟು 1,19,450 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. 

Advertisement

ಆರೋಪಿ ಮಹಮದ್‌ ಶಾಕಿರ್‌ ಗಾಂಜಾ ಮಾರಾಟ ಮಾಡಲು ಸೋಮವಾರ ಮಂಗಳೂರಿಗೆ ಬಂದಿದ್ದಾನೆ ಎಂಬ ಖಚಿತ ಮಾಹಿತಿ ಅನ್ವಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಈತ ನಗರದ ವಿವಿಧೆಡೆ ವಿದ್ಯಾರ್ಥಿಗಳಿಗೆ ಹಾಗೂ ಇತರರಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಪೊಲೀಸ್‌ ಆಯುಕ್ತ ಟಿ.ಆರ್‌.ಸುರೇಶ್‌, ಡಿಸಿಪಿಗಳಾದ ಹನುಮಂತ ರಾಯ ಮತ್ತು ಉಮಾ ಪ್ರಶಾಂತ್‌ ಹಾಗೂ ಎಸಿಪಿ ಉದಯ ನಾಯಕ್‌ ಅವರ ಮಾರ್ಗದರ್ಶನದಲ್ಲಿ ರೌಡಿ ನಿಗ್ರಹದಳದ ಪೊಲೀಸ್‌ ಇನ್ಸ್‌ಪೆಕ್ಟರ್‌ ರವೀಶ್‌ ಎಸ್‌.ನಾಯಕ್‌, ಪಿಎಸ್‌ಐ ಕೃಷ್ಣ ಬಿ., ಎಎಸ್‌ಐಗಳಾದ ಬಾಲಕೃಷ್ಣ, ದಾಮೋದರ್‌, ಹೆಡ್‌ಕಾನ್ಸ್‌ಟೆಬಲ್‌ಗ‌ಳಾದ ಸಂತೋಷ್‌ ಕುಮಾರ್‌ ಸಸಿಹಿತ್ಲು, ಸಿದ್ದಾರ್ಥ್, ದಯಾನಂದ, ಲೋಕೇಶ್‌, ಕಾನ್ಸ್‌ಟೆಬಲ್‌ಗ‌ಳಾದ ಪ್ರಮೋದ್‌, ವಿನೋದ್‌, ಯೋಗೀಶ್‌, ಕಾಂತರಾಜು, ಹೇಮಂತ್‌ ಕುಮಾರ್‌, ಶಂಕರಪ್ಪ ಲಮಾಣಿ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next