Advertisement

ಡ್ರಾಪ್‌ ನೀಡಿದ ವ್ಯಕ್ತಿಯ ಮೊಬೈಲ್‌, ಎಟಿಎಂ ಕಾರ್ಡ್‌ ಕದ್ದ ಆರೋಪಿ

03:36 PM May 26, 2022 | Team Udayavani |

ಬೆಂಗಳೂರು: ಡ್ರಾಪ್‌ ನೀಡಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ದುಷ್ಕರ್ಮಿಯೊಬ್ಬ ಬೈಕ್‌ ಸಮೇತ ಪರಾರಿಯಾಗಿರುವ ಘಟನೆ ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮಾರಗೊಂಡನಹಳ್ಳಿಯ ತರುಣ್‌ ಅಗರ್‌ ವಾಲ್‌ (31) ಹಲ್ಲೆಗೊಳಗಾದವರು. ಹಲ್ಲೆಗೈದ ಆರೋಪಿ ತಲೆ ಮರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಮೇ 18ರಂದು ತಡರಾತ್ರಿ 1 ಗಂಟೆ ಸುಮಾರಿಗೆ ತರುಣ್‌ ಅಗರ್‌ವಾಲ್‌ ಮನೆ ಸಮೀಪದಲ್ಲಿ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ತಮಿಳು ಮತ್ತು ಇಂಗ್ಲಿಷ್‌ ಮಿಶ್ರಿತ ಭಾಷೆ ಮಾತನಾಡುವ ವ್ಯಕ್ತಿಯೊಬ್ಬ ತನ್ನ ಬೈಕ್‌ನಲ್ಲಿ ಪೆಟ್ರೊಲ್‌ ಮುಗಿದು ರಸ್ತೆಯಲ್ಲೇ ಬೈಕ್‌ ನಿಲ್ಲಿಸಿದ್ದೇನೆ. ಪೆಟ್ರೊಲ್‌ ತುಂಬಿಸಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದ.

ಇದನ್ನೂ ಓದಿ:ತಾಯಿಯ ಸಾವು: ಜಿಗುಪ್ಸೆಯಿಂದ ಮಗ ಆತ್ಮಹತ್ಯೆ

ಮೊದಲಿಗೆ ತರುಣ್‌ ನಿರಾಕರಿಸಿದರೂ, ಕೊನೆಗೆ ಒಪ್ಪಿಕೊಂಡು ಆತನನ್ನು ಬೈಕ್‌ ನಿಲ್ಲಿಸಿರುವ ಸ್ಥಳಕ್ಕೆ ತಮ್ಮ ಬೈಕ್‌ನಲ್ಲಿಯೇ ಕರೆದೊಯ್ದಿದ್ದರು. ವಿಜಯ ಬ್ಯಾಂಕ್‌ ಕಾಲೋನಿಯ ಎಕ್ಸ್‌ಸ್ಟೇಷನ್‌ ಕಡೆಯ ಹೊರಮಾವು ರಸ್ತೆಯಲ್ಲಿ ಬೈಕ್‌ ನಿಲ್ಲಿಸಿದ್ದಾನೆ. ನಂತರ ತನ್ನ ಬೈಕ್‌ನಲ್ಲಿದ್ದ ಮಾರಕಾಸ್ತ್ರ ತೆಗೆದು ತರುಣ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ತರುಣ್‌ನನ್ನು ಪಕ್ಕಕ್ಕೆ ತಳ್ಳಿ, ಅವರ ಮೊಬೈಲ್‌, ಎಟಿಎಂ ಕಾರ್ಡ್‌ಗಳು ಮತ್ತು ಬೈಕ್‌ ಸಮೇತ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next