Advertisement

ಮಮತಾ ವಿರುದ್ಧ ಹೇಳಿಕೆ: ಸಂಸತ್‌ನಲ್ಲಿ ಕೋಲಾಹಲ

03:50 AM Apr 13, 2017 | Team Udayavani |

ನವದೆಹಲಿ/ಕೋಲ್ಕತಾ: ಆರ್‌ಎಸ್‌ಎಸ್‌ನವರ ಹತ್ಯೆಗೆ ಕಾರಣರಾದ ಕೇರಳ ಸಿಎಂ ಪಿಣರಾಯಿ ವಿಜಯನ್‌ ತಲೆಕಡಿದರೆ 1 ಕೋಟಿ ರೂ. ನೀಡುತ್ತೇನೆಂದು ಆರ್‌ಎಸ್‌ಎಸ್‌ ಕಾರ್ಯಕರ್ತ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣ ವಾಗಿತ್ತು. ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಯುವ ಮೋರ್ಚಾ ನಾಯಕ ಯೋಗೇಶ್‌ ವಾಷೆ°ì ಸಿಎಂ ಮಮತಾ ಬ್ಯಾನರ್ಜಿ ತಲೆ ಕಡಿದರೆ 11 ಲಕ್ಷ ರೂ. ಕೊಡುವುದಾಗಿ ಹೇಳಿದ್ದು ಕೋಲಾಹಲಸೃಷ್ಟಿಸಿದೆ. ಕೆಂಪು ಶರ್ಟ್‌, ಕೆಂಪು ಪ್ಯಾಂಟ್‌ ಧರಿಸಿದವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಅವರಿಗೇನು ಮಾನವೀಯತೆ ಇದೆಯೇ? ಮುಸ್ಲಿಮರ ಪರ ಮಾತನಾಡುವ ಮಮತಾ ರಿಗೆ ಮಾನವೀಯತೆ ಇದೆಯೇ ಎಂದು ಪ್ರಶ್ನಿಸಿದ್ದರು.

Advertisement

ಇದರಿಂದ ಸಂಸತ್‌ ಅಧಿವೇಶನದ ಕೊನೆಯ ದಿನ ಕೋಲಾಹಲ ಉಂಟಾಯಿತು. ಸರ್ಕಾರ ಮುಜುಗರ ಎದುರಿಸುವಂತಾಯಿತು. ಜತೆಗೆ ಹೇಳಿಕೆಯನ್ನೂ ಖಂಡಿಸಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಮಮತಾ, “ಇಂಥ ಹೇಳಿಕೆಗಳಿಂದ ನನ್ನನ್ನು ಹೆದರಿಸಲು ಸಾಧ್ಯವಿಲ್ಲ, ದೇವರು ಅವರನ್ನು ಕ್ಷಮಿಸಲಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next