Advertisement

ದೀದಿಯ ಓಲೈಕೆ ನೀತಿ ಸರಿಯಲ್ಲ: ತ್ರಿಪಾಠಿ

01:17 AM Jul 28, 2019 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಉತ್ತಮ ದೃಷ್ಟಿಕೋನ ಹೊಂದಿದ್ದಾರೆ ಹಾಗೂ ತನ್ನ ನಿರ್ಧಾರಗಳನ್ನು ಅನುಷ್ಠಾನ ಗೊಳಿಸುವ ಅಧಿಕಾರವೂ ಇದೆ. ಆದರೆ ಅವರ ಓಲೈಕೆ ನೀತಿಯಿಂದಾಗಿ ಸಾಮಾಜಿಕ ಸಾಮ ರಸ್ಯಕ್ಕೆ ಅಡ್ಡಿಯುಂಟಾಗಿದೆ ಎಂದು ರಾಜ್ಯಪಾಲ ಕೇಸರಿ ನಾಥ್‌ ತ್ರಿಪಾಠಿ ಹೇಳಿದ್ದಾರೆ. ಅವರು ಸಮಾಜದ ಎಲ್ಲ ಜನರನ್ನೂ ಸಮಾನವಾಗಿ ಪರಿಗಣಿಸಬೇಕು. ಪಶ್ಚಿಮ ಬಂಗಾಳದ ಪ್ರತಿ ವ್ಯಕ್ತಿಯನ್ನೂ ಸಮಾನವಾಗಿ ಪರಿಗಣಿಸಬೇಕು. ಯಾವುದೇ ತಾರತಮ್ಯ ಎಸಗಬಾರದು. ತನ್ನ ಭಾವನೆಗಳನ್ನು ಅವರು ಹಿಡಿತದಲ್ಲಿಟ್ಟು ಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

Advertisement

ತ್ರಿಪಾಠಿ ಅಧಿಕಾರಾವಧಿ ಜುಲೈ 30 ರಂದು ಕೊನೆಗೊಳ್ಳಲಿದ್ದು, ಅಂದು ಜಗದೀಪ್‌ ಧನ್‌ಕರ್‌ ನೂತನ ರಾಜ್ಯಪಾಲರಾಗಿ ನೇಮಕ ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ಅವರು ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಮತಾ ಹೇಳಿಕೆಯಲ್ಲೇ ತಾರತಮ್ಯ ಪ್ರದರ್ಶನವಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next