Advertisement

ಅತೃಪ್ತರ ರಾಜೀನಾಮೆ: ಕುಮಾರಸ್ವಾಮಿಗೆ ಧೈರ್ಯ ತುಂಬಿದ ಮಮತಾ ಬ್ಯಾನರ್ಜಿ

02:02 PM Jul 12, 2019 | Sathish malya |

ಹೊಸದಿಲ್ಲಿ : ಅತೃಪ್ತ ಶಾಸಕರ ರಾಜೀನಾಮೆಯಿಂದ ಹೈರಾಣಾಗಿರುವ ಕರ್ನಾಟಕ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಧೈರ್ಯ ತುಂಬಿದ್ದಾರೆ.

Advertisement

‘ಎಂತಹ ವಿಷಮತೆ ಎದುರಾದರೂ ಎದೆಗುಂದಬೇಡಿ; ನಿಮ್ಮ ಅಚಲ ನಿಲುವಿನಿಂದ ದೂರ ಸರಿಯಬೇಡಿ; ಬಿಜೆಪಿ ವಿರುದ್ಧ ಸೆಟೆದು ನಿಲ್ಲುವ ನಿಮ್ಮ ಪ್ರಯತ್ನಗಳನ್ನು ನಿಲ್ಲಿಸಬೇಡಿ’ ಎಂದು ಮಮತಾ ಬ್ಯಾನರ್ಜಿ ಅವರು ಕುಮಾರಸ್ವಾಮಿ ಅವರಿಗೆ ಫೋನ್‌ ಕರೆ ಮಾಡಿ ಹೇಳಿದ್ದಾರೆ.

ಪಕ್ಷಾಂತರ ಪಿಡುಗಿನಿಂದ ಸ್ವತಃ ಸಂಕಷ್ಟಕ್ಕೆ ಗುರಿಯಾಗಿರುವ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಯ ಹಲವರು ಸಂಸದರು, ಶಾಸಕರು ಈಚೆಗೆ ಬಿಜೆಪಿ ಸೇರಿರುವ ಹೊರತಾಗಿಯೂ, ಬಿಜೆಪಿಯ ಕುಟಿಲೋಪಾಯಗಳಿಗೆ ಬಲಿ ಬೀಳದಂತೆ ಎಚ್ಚರಿಕೆ ವಹಿಸುವಂತೆ ಕುಮಾರ ಸ್ವಾಮಿ ಅವರಿಗೆ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next