Advertisement

ರಾಜೀನಾಮೆಗೆ ಪಕ್ಷ ಒಪ್ಪಲಿಲ್ಲ ಎಂದ ಮಮತಾ

02:07 AM May 26, 2019 | Sriram |

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದ್ದಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಮುಂದಾ ಗಿದ್ದು, ಅದಕ್ಕೆ ಪಕ್ಷ ಒಪ್ಪಿಗೆ ನೀಡಿಲ್ಲ. ಶನಿವಾರ ಪಕ್ಷದ ನಾಯಕರೊಂದಿಗೆ ತುರ್ತು ಸಭೆ ನಡೆಸಿದ ಬಳಿಕ ಸ್ವತಃ ಮಮತಾ ಅವರೇ ಈ ವಿಚಾರ ತಿಳಿಸಿದ್ದಾರೆ.

Advertisement

“ಹಲವು ರಾಜ್ಯಗಳಲ್ಲಿ ಪ್ರತಿಪಕ್ಷಗಳು ಸಂಪೂರ್ಣ ವಾಗಿ ಧೂಳೀಪಟವಾಗಿದ್ದು ಹೇಗೆ ಎಂಬುದು ಯಕ್ಷಪ್ರಶ್ನೆ ಯಾಗಿದೆ. ಇಲ್ಲಿ ಏನೋ ಸೆಟ್ಟಿಂಗ್‌ ನಡೆದಿದೆ ಹಾಗೂ ವಿದೇಶಿ ಶಕ್ತಿಯೂ ಭಾಗಿಯಾಗಿರುವ ಸಾಧ್ಯತೆಯಿದೆ’ ಎಂದು ಮಮತಾ ಹೇಳಿದ್ದಾರೆ. ಇದೇ ವೇಳೆ ಟಿಎಂಸಿಯ 143 ಬಂಡಾಯ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ನಾಯಕ ಮುಕುಲ್‌ ರಾಯ್‌ ತಿಳಿಸಿದ್ದು, ಟಿಎಂಸಿ ಯಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.

ಬಿಜೆಪಿ ಕಾರ್ಯಕರ್ತನ ಹತ್ಯೆ: ಪ.ಬಂಗಾಳದಲ್ಲಿ ಚುನಾವ ಣೋತ್ತರ ಹಿಂಸಾಚಾರ ಮುಂದುವರಿದಿದ್ದು, ಬಿಜೆಪಿ- ಟಿಎಂಸಿ ನಡುವಿನ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬರು ಸಾವಿಗೀ ಡಾಗಿದ್ದಾರೆ. ನಾದಿಯಾ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next