Advertisement

ಬಿಜೆಪಿಯಿಂದ ಬಹಿರಂಗ ರಾಜಕೀಯ ದ್ವೇಷ ಸಾಧನೆ: ಮಮತಾ ಖಂಡನೆ

05:00 PM Jul 12, 2018 | Team Udayavani |

ಕೋಲ್ಕತ : ಸ್ವರಾಜ್‌ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್‌ ಅವರ ಸಹೋದರಿಯರ ಒಡೆತನದಲ್ಲಿರುವ ರೇವಾರಿಯಲ್ಲಿನ ಆಸ್ಪತ್ರೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿರುವ ದಾಳಿಯನ್ನು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದಾರೆ. 

Advertisement

ಮಹಾ ಚುನಾವಣೆಗೆ ಮುನ್ನ ವಿರೋಧ ಪಕ್ಷೀಯರ ಧ್ವನಿಯನ್ನು ಅಡಗಿಸುವುದಕ್ಕಾಗಿ ಬಿಜೆಪಿ, ಸರಕಾರಿ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ. 

ಬಹಿರಂಗ ರಾಜಕೀಯ ದ್ವೇಷ ಸಾಧನೆಗೆ ಬಿಜೆಪಿಯೇ ಹೊಣೆಗಾರನಾಗಿದೆ ಎಂದು ಮಮತಾ ಖಂಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next