Advertisement

ಮಲ್ಪೆ: ಬಾವಿಕಟ್ಟೆ ಬಳಿ ನಿಂತಿದ್ದ ಬಾಲಕ ಸಿಡಿಲು ಬಡಿದು ಸಾವು

11:17 AM Jul 18, 2020 | keerthan |

ಮಲ್ಪೆ: ಇತ್ತೀಚೆಗೆ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದ ಬಾಲಕನೋರ್ವ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಮಲ್ಪೆ ಲಕ್ಷ್ಮೀ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

Advertisement

ಲಕ್ಷ್ಮೀ ನಗರ ಗರ್ಡೆ ಆರನೇ ಅಡ್ಡ ರಸ್ತೆಯ ಮಂಜುನಾಥ್ ನಾಯಕ್ ಮತ್ತು ಶಕುಂತಲಾ ನಾಯಕ್ ಅವರ ಪುತ್ರ ಗೌತಮ್ ಸಾವನ್ನಪ್ಪಿದ್ದ ಬಾಲಕ. ಆಟ ಪಾಠಗಳಲ್ಲಿ ಸದಾ ಮುಂದಿದ್ದ ಈತ ಇತ್ತೀಚೆಗಷ್ಟೇ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದ.

ಶುಕ್ರವಾರ ರಾತ್ರಿ 7.30ರ ಸುಮಾರಿಗೆ ಘಟನೆ ನಡೆದಿದ್ದು, ಬಾಲಕ ಬಾವಿ ಕಟ್ಟೆ ಬಳಿ ನಿಂತಿದ್ದಾಗ ಸಿಡಿಲು ಬಡಿದಿದ್ದು, ಬಳಿಯಿದ್ದ ಪಂಪ್ ಸೆಟ್ ನಿಂದ ವಿದ್ಯುತ್ ಪ್ರವಹಿಸಿರಬಹುದು ಎನ್ನಲಾಗಿದೆ.

ಬಾಲಕನ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next