Advertisement

ಮಲ್ಪೆ ಸಿಟಿಜನ್‌ ಸರ್ಕಲ್‌ ರಸ್ತೆ ವಿಸ್ತರಣೆ: ಶಾಸಕರಿಂದ ಪರಿಶೀಲನೆ

10:16 PM Aug 04, 2019 | Sriram |

ಮಲ್ಪೆ: ಇಲ್ಲಿನ ಸಿಟಿಜನ್‌ ಸರ್ಕಲ್‌ನಿಂದ ಮುಖ್ಯರಸ್ತೆಯ ವರೆಗಿನ ರಸ್ತೆ ವಿಸ್ತರಣೆ ಕಾಲ ಕೂಡಿ ಬಂದಿದ್ದು ಶಾಸಕ ಕೆ. ರಘುಪತಿ ಭಟ್‌ ಅವರು ನಗರಸಭಾ ಅಧಿಕಾರಿಗಳ ಜತೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ರೂಪುರೇಷಗಳ ಬಗ್ಗೆ ಪರಿಶೀಲನೆ ನಡೆಸಿದರು. ಎದುರಾಗುತ್ತಿರುವ ಕೆಲವೊಂದು ಸಮಸ್ಯೆಗಳಿಗೆ ಶಾಸಕರು ಪರಿಹಾರವನ್ನು ಸೂಚಿಸಿದರು.

Advertisement

ನಗರಸಭಾ ಕೊಳ ವಾರ್ಡಿನ ಸದಸ್ಯೆ ಲಕ್ಷ್ಮೀ ಮಂಜುನಾಥ್‌, ಮಲ್ಪೆ ಸೆಂಟ್ರಲ್‌ ವಾರ್ಡಿನ ಎಡ್ಲಿನ್‌ ಕರ್ಕಡ, ಕೊಡವೂರು ವಾರ್ಡಿನ ವಿಜಯ ಕೊಡವೂರು, ಕಲ್ಮಾಡಿ ವಾರ್ಡಿನ ಸುಂದರ ಕಲ್ಮಾಡಿ, ನಗರಸಭಾ ಎಂಜಿನಿಯರ್‌ ಗಣೇಶ್‌, ದುರ್ಗಾ ಪ್ರಸಾದ್‌, ಬಿಜೆಪಿ ಮುಖಂಡರುಗಳಾದ ನಾಗೇಶ್‌ ಅಮೀನ್‌, ನಾಗೇಶ್‌ ಸಾಲ್ಯಾನ್‌, ಸುರೇಶ್‌ ಸಾಲ್ಯಾನ್‌, ದಯಾನಂದ ಕುಂದರ್‌, ಮನೋಜ್‌ ಸುವರ್ಣ, ಲಕ್ಷ್ಮೀಶ್‌, ಕರುಣಾಕರ ಸಾಲ್ಯಾನ್‌, ರಾಜೇಶ್‌ ಕುಂದರ್‌, ಬಾಲಚಂದ್ರ ಸಾಲ್ಯಾನ್‌, ಮಂಜುಕೊಳ ಉಪಸ್ಥಿತರಿದ್ದರು.

ಕಾಮಗಾರಿಗೆ ಹಸಿರು ನಿಶಾನೆ
ಪ್ರವಾಸೋದ್ಯಮದ ಅಭಿವೃದ್ದಿ ಪೂರಕವಾಗಿ ಅಗತ್ಯವಾಗಿ ಈಗಾಗಲೇ ಈ ರಸ್ತೆಯ ಅಗಲೀಕರಣವಾಗಬೇಕಿತ್ತು. ಇದೀಗ ಶಾಸಕರ ನೇತೃತ್ವದಲ್ಲಿ ಕಾಮಗಾರಿ ಹಸಿರು ನಿಶಾನೆ ದೊರಕಿದೆ. ಈಗಾಗಲೇ ವಡಭಾಂಡೇಶ್ವರದಿಂದ ಸಿಟಿಜನ್‌ ಸರ್ಕಲ್‌ವರೆಗೆ ದ್ವಿಪತ ರಸ್ತೆಯಾಗಿದ್ದು ಅದರಂತೆ ಅಷೇr ಅಗಲದಲ್ಲಿ ಮಲ್ಪೆ ಮುಖ್ಯ ರಸ್ತೆಯವರೆಗೆ ಮುಂದುವರೆಯಬೇಕಾಗಿದೆ.
– ಲಕ್ಷ್ಮೀ ಮಂಜುನಾಥ್‌, ನಗರಸಭೆ ಕೊಳವಾರ್ಡ್‌

          
Advertisement

Udayavani is now on Telegram. Click here to join our channel and stay updated with the latest news.

Next