Advertisement

ಸೋಮವಾರವೂ ಪತ್ತೆಯಾಗಿಲ್ಲ ಮನೋಜ್‌ ದೇಹ

09:37 AM Jun 26, 2018 | Harsha Rao |

ಸೋಮವಾರಪೇಟೆ: ಮಲ್ಲಳ್ಳಿ ಜಲಪಾತದಲ್ಲಿ ಶುಕ್ರವಾರ ಕಾಲು ಜಾರಿಬಿದ್ದು ಮೃತಪಟ್ಟ ಕುಶಾಲನಗರ ಸುಂದರನಗರ ನಿವಾಸಿ ಮನೋಜ್‌(24)ನ ಮೃತದೇಹ ಪತ್ತೆಕಾರ್ಯ ಸೋಮವಾರವೂ ಮುಂದುವರಿಯಿತು.

Advertisement

ಮುಳುಗುತಜ್ಞ ಕುಶಾಲನಗರದ ರಾಮಕೃಷ್ಣ ನೇತೃತ್ವದ ತಂಡ ಹಗ್ಗದ ಸಹಾಯದಿಂದ ಜಲಪಾತದ ಬಂಡೆಗಳನ್ನು ಇಳಿದು ಹುಡುಕಾಟ ನಡೆಸಿದರು. ಜಲಪಾತದ  ಹಿಂಭಾಗದಲ್ಲಿರುವ ಜಲವಿದ್ಯುತ್‌ ಘಟಕದಲ್ಲಿ ಅರ್ಧ ಗಂಟೆಗಳ ಕಾಲ ನೀರಿನ ಹರಿವಿಗೆ ತಡೆವೊಡ್ಡಲಾಯಿತು. ಜಲಪಾತದಲ್ಲಿ ನೀರಿನ ಹರಿವು ಕಡಿಮೆಯಾದಂತೆ ಪತ್ತೆಕಾರ್ಯ ತೀವ್ರಗೊಳಿಸಲಾಯಿತು. ಆದರೂ ದೇಹ ಪತ್ತೆಯಾಗಿಲ್ಲ. ಮಂಗಳವಾರ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಠಾಣಾಧಿಕಾರಿ ಶಿವಣ್ಣ ತಿಳಿಸಿದರು. ಎಎಸ್‌ಐ ಕುಟ್ಟಪ್ಪ, ಸಿಬಂದಿ ವರ್ಗದ ಜಗದೀಶ್‌, ಕುಮಾರ್‌  ಸ್ಥಳದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next