Advertisement

ಮಲ್ಪೆಯ ಮೀನುಗಾರಿಕೆ ಬೋಟ್‌ ಗೋವಾದಲ್ಲಿ ಮುಳುಗಡೆ, 7 ಮಂದಿಯ ರಕ್ಷಣೆ

09:47 AM Jun 03, 2020 | sudhir |

ಮಲ್ಪೆ: ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಆಳಸಮುದ್ರ ಬೋಟ್‌ ಮಂಗಳವಾರ ಮಧ್ಯಾಹ್ನ ಗೋವಾ ಸಮೀಪ ಮುಳುಗಡೆ ಗೊಂಡಿದೆ. ಬೋಟಿನಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

Advertisement

ಮಲ್ಪೆ ವಡಭಾಂಡೇಶ್ವರದ ದೀಪಿಕಾ ಅವರ ಮಾಲಕತ್ವದ ಶ್ರೀ ದುರ್ಗಾ ಹನುಮ ಆಳಸಮುದ್ರ ಬೋಟ್‌ ಮೇ 23ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮಹಾರಾಷ್ಟ್ರದಲ್ಲಿ ಮೀನುಗಾರಿಕೆ ನಡೆಸಿ ವಾಪಸು ಬರುವಾಗ ಮಂಗಳವಾರ ಅಪರಾಹ್ನ 2ರ ವೇಳೆಗೆ ಗೋವಾ ಸಮೀಪದ ರೆಡ್‌ಹೌಸ್‌ ಬಳಿ ಸುಮಾರು 27 ನಾಟಿಕಲ್‌ ಮೈಲು ದೂರದಲ್ಲಿರುವಾಗ ಗಾಳಿಯ ರಭಸಕ್ಕೆ ಫೈಬರ್‌ ಒಡೆದು ನೀರು ಬೋಟಿನ ಒಳ ಸೇರಿ ಬೋಟ್‌ ಮುಳುಗಲಾರಂಭಿಸಿತು. ಅದರಲ್ಲಿದ್ದ ಮೀನುಗಾರರು ತತ್‌ಕ್ಷಣ ಬೇರೆ ಬೋಟಿ ನವರೆಗೆ ಮಾಹಿತಿ ನೀಡಿದರು.

ಬೋಟಿನಲ್ಲಿದ್ದ ಉ.ಕ. ಜಿಲ್ಲೆಯ ಕೇಶವ ಮಾದೇವ ಮೊಗೇರ, ನಾಗರಾಜ್‌ ಈಶ್ವರ ಮೊಗೇರ, ರಾಮಚಂದ್ರ ನಾರಾಯಣ ನಾಯ್ಕ, ಈಶ್ವರ ವೆಂಕಟರಮಣ ಹರಿಕಾಂತ್ರ, ದಿನೇಶ್‌ ಜಟ್ಟ ಮೊಗೇರ, ಗುರುರಾಜ್‌ ಮಂಜುನಾಥ ಮೊಗೇರ, ಚಿದಂಬರ ಗಣಪತಿ ಹರಿಕಾಂತ್ರ ಅವರನ್ನು ಸಮೀಪದಲ್ಲಿದ್ದ ಶಿವಬೈರವ ಬೋಟಿನವರು ರಕ್ಷಿಸಿ ದಡ ಸೇರಿಸಿದ್ದಾರೆ. ಸುಮಾರು 8 ಲಕ್ಷ ರೂ. ಮೌಲ್ಯದ ಮೀನು, ಡೀಸೆಲ್‌ ಸಮುದ್ರಪಾಲಾಗಿವೆೆ. ಸುಮಾರು 60 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next