Advertisement

ಕೇರಳ ಯೋಧ ಹುತಾತ್ಮ: ಹೆಲಿಕಾಪ್ಟರ್‌ ಪತನದಲ್ಲಿ ಮಡಿದ ಯೋಧ ಕೆ.ವಿ.ಅಶ್ವಿ‌ನ್‌

11:46 AM Oct 23, 2022 | Team Udayavani |

ಇಟಾನಗರ: ಅರುಣಾಚಲ ಪ್ರದೇಶದ ಅಪ್ಪರ್‌ ಸಿಯಾಂಗ್‌ ಜಿಲ್ಲೆಯಲ್ಲಿ ಶುಕ್ರವಾರ ಭೂಸೇನೆಯ ಹೆಲಿಕಾಪ್ಟರ್‌ ಪತನಗೊಂಡು ಸಂಭವಿಸಿದ ದುರಂತದಲ್ಲಿ ಕಾಸರಗೋಡು ಜಿಲ್ಲೆಯ ಯೋಧ ಕೆ.ವಿ.ಅಶ್ವಿ‌ನ್‌ (24) ಹುತಾತ್ಮರಾಗಿದ್ದಾರೆ. ಅವರು ಜಿಲ್ಲೆಯ ಚೆರ್ವತ್ತೂರ್‌ನ ಕಝಕ್ಕು­ಮೇರಿಯ ನಿವಾಸಿಯಾಗಿದ್ದಾರೆ.

Advertisement

ಒಟ್ಟಾರೆಯಾಗಿ ಈ ದುರಂತದಲ್ಲಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಐದು ಮಂದಿ ಅಸುನೀಗಿದ್ದಾರೆ. ಅಶ್ವಿ‌ನ್‌ ಅವರು 4 ವರ್ಷಗಳಿಂದ ಭೂಸೇನೆಯ ತಾಂತ್ರಿಕ ಸಿಬಂದಿಯಾಗಿ ಕರ್ತವ್ಯ ನಿರ್ವಹಿ­ಸು­ತ್ತಿದ್ದರು. ರವಿವಾರ ಪಾರ್ಥಿವ ಶರೀರವನ್ನು ಕಾಸರಗೋಡಿಗೆ ತರಲಾಗು­ತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಪೈಲಟ್‌ಗಳಾದ ಮೇಜರ್‌ ವಿಕಾಸ್‌ ಭಂಭು, ಮೇಜರ್‌ ಮುಸ್ತಫಾ ಬೋಹರಾ ಮತ್ತು ಹವಾ­ಲ್ದಾರ್‌ ಬೀರೇಶ್‌ ಸಿನ್ಹಾ, ನಾಯಕ್‌ ರೋಹಿತಾಶ್ವ ಕುಮಾರ್‌ ಹುತಾತ್ಮರಾದ ಇತರರು. ದೈನಂದಿನ ಹಾರಾಟದ ನಿಮಿತ್ತ ಜಿಲ್ಲೆಯಲ್ಲಿ ಇರುವ ಭೂಸೇನಾ ಕೇಂದ್ರದಿಂದ ಎಎಲ್‌ಎಚ್‌ ಟೇಕಾಫ್ ಆಗಿತ್ತು. ಇಬ್ಬರು ಪೈಲಟ್‌ ಸೇರಿದಂತೆ ಒಟ್ಟು ಐವರು ಸಿಬಂದಿ ಹೆಲಿಕಾಪ್ಟರ್‌ನಲ್ಲಿ ಇದ್ದರು.

ಪತನಗೊಂಡ ಹೆಲಿಕಾಪ್ಟರ್‌ 2015ರಲ್ಲಿ ಸೇನೆಗೆ ಸೇರ್ಪಡೆಯಾಗಿತ್ತು. ಇದೇ ವೇಳೆ, ಕಾಪ್ಟರ್‌ನ ಪೈಲಟ್‌ ತಾಂತ್ರಿಕ ತೊಂದರೆಯ ಬಗ್ಗೆ ಏರ್‌ಟ್ರಾಫಿಕ್‌ ಕಂಟ್ರೋಲ್‌ ಕಚೇರಿಗೆ ಮುನ್ಸೂಚನೆ ನೀಡುವ ನಿಟ್ಟಿನಲ್ಲಿ ಕರೆ ಮಾಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next