Advertisement

Mollywood: ನಟ ರಿಯಾಜ್ ಫೋನ್‌ ಮಾಡಿ ಲೈಂಗಿಕ ಆಸಕ್ತಿ ಬಗ್ಗೆ ಮಾತನಾಡಿದ್ದರು.. ನಟಿಯ ಆರೋಪ

10:49 AM Aug 26, 2024 | Team Udayavani |

ಕೊಚ್ಚಿ: ಮಾಲಿವುಡ್‌(Mollywood) ಸಿನಿಮಾರಂಗದದಲ್ಲಿ ಕಳೆದ ಕೆಲ ದಿನಗಳಿಂದ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬರುತ್ತಿದೆ. ಇದೀಗ ಮತ್ತೊಬ್ಬ ನಟನ ವಿರುದ್ಧವೂ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿ ಬಂದಿದೆ.

Advertisement

ಮಾಲಿವುಡ್‌ ನಿರ್ದೇಶಕ ರಂಜಿತ್‌ ಹಾಗೂ ನಟ ಸಿದ್ದೀಕ್‌ ವಿರುದ್ಧ ನಟಿಯರು ಅಸಭ್ಯ ವರ್ತನೆ ಹಾಗೂ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿರುವ ಸುದ್ದಿ ಚರ್ಚೆಯಲ್ಲಿರುವಾಗಲೇ ಇದೀಗ ಕಾಲಿವುಡ್‌ – ಮಾಲಿವುಡ್‌ ನಟ ರಿಯಾಜ್ ಖಾನ್ (Actor Riyaz Khan) ವಿರುದ್ಧ ಇದೇ ರೀತಿಯ ಆರೋಪ ಕೇಳಿಬಂದಿದೆ.

ಮಲಯಾಳಂ ನಟಿಯೊಬ್ಬರು ಪ್ರಾದೇಶಿಕ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟ ರಿಯಾಜ್‌ ಫೋನ್‌ ಸಂಭಾಷಣೆಯಲ್ಲಿ ಅಸಭ್ಯವಾಗಿ ಮಾತನಾಡಿದ ಬಗ್ಗೆ ಹೇಳಿದ್ದಾರೆ.

“ಮಧ್ಯರಾತ್ರಿ ನಟನಿಂದ‌ (ರಿಯಾಜ್‌ ಖಾನ್) ಫೋನ್ ಕರೆ ಬಂದಿತ್ತು. ಛಾಯಾಗ್ರಾಹಕರೊಬ್ಬರು ನನ್ನ ಒಪ್ಪಿಗೆಯಿಲ್ಲದೆ ನನ್ನ ಫೋನ್ ಸಂಖ್ಯೆಯನ್ನು ಅವರೊಂದಿಗೆ ಹಂಚಿಕೊಂಡಿದ್ದರು. ಅವರು ನನ್ನ ಸ್ಟಿಲ್ಸ್ ನೋಡಿ, ನನ್ನ ನಂಬರ್ ತೆಗೆದುಕೊಂಡು ನನಗೆ ಕರೆ ಮಾಡಿದರು. ಆ ವ್ಯಕ್ತಿ ಲೈಂಗಿಕತೆ ಮತ್ತು ಅವರ ಲೈಂಗಿಕ ಆಸಕ್ತಿಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ನನಗೆ ಅವನೊಂದಿಗೆ ಮಲಗಲು ಆಸಕ್ತಿ ಇದೆಯೇ ಎಂದು ಕೇಳಿದರು. ನನಗೆ ಯಾವ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಇಷ್ಟವೆಂದು ಕೇಳಿದರು. ಆಗ ನನಗೆ 20 ವರ್ಷ. ಫೋನ್ ಮಾಡಿದ ನಂತರ ನಾನು ತುಂಬಾ ಆಘಾತಕ್ಕೊಳಗಾಗಿದ್ದೆ. ಕರೆಯ ಸಮಯದಲ್ಲಿ ನನಗೆ ಒಂದು ಮಾತನ್ನೂ ಮಾತನಾಡಲು ಸಾಧ್ಯವಾಗಲಿಲ್ಲ” ಎಂದು ಘಟನೆ ಬಗ್ಗೆ ಹೇಳಿದರು.

Advertisement

“ನನಗೆ ಯಾವುದೇ ಆಸಕ್ತಿಯಿಲ್ಲ ಎಂದು ಅರ್ಥಮಾಡಿಕೊಂಡ ನಂತರ, ಆ ವ್ಯಕ್ತಿ ಮುಂದಿನ ಒಂಬತ್ತು ದಿನಗಳವರೆಗೆ ಕೊಚ್ಚಿಯಲ್ಲಿ ಇರುವುದಾಗಿ ಹೇಳಿ, ನಾನು ಅವರಿಗೆ ಕೆಲವು ಹುಡುಗಿಯರನ್ನು ವ್ಯವಸ್ಥೆ ಮಾಡಬಹುದೇ ಎಂದು ಕೇಳಿದರು. ಇದನ್ನು ಕೇಳಿ ನನಗೆ ಆಘಾತಕ್ಕೆ ಒಳಗಾಗಿದ್ದೆ” ಎಂದು ನಟಿ ಹೇಳಿದ್ದಾರೆ.

ನಟಿಯ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದ ಹಿನ್ನೆಲೆ ಮಲಯಾಳಂ ನಿರ್ದೇಶಕ ರಂಜಿತ್ (Malayalam director Ranjith) ರಾಜ್ಯ ಸರ್ಕಾರ ನಡೆಸುವ ಕೇರಳ ಚಲಚಿತ್ರ (Kerala Chalachitra Academy) ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ (ಆ.25ರಂದು) ರಾಜೀನಾಮೆ ಸಲ್ಲಿಸಿದ್ದಾರೆ.

ಇತ್ತ ಮತ್ತೊಂದು ಲೈಂಗಿಕ ಕಿರುಕುಳ ಆರೋಪವನ್ನು ಎದುರಿಸುತ್ತಿರುವ ಹಿರಿಯ ನಟ ಸಿದ್ದೀಕ್ (Actor Siddique) ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (Malayalam Movie Artistes) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ತನಿಖೆಗೆ ಎಸ್‌ಐಟಿ ರಚನೆ: ಸಿಎಂ ಪಿಣರಾಯಿ ಚಿತ್ರ ನಟಿಯರು ತಮ್ಮ ವಿರುದ್ಧ ನಡೆದಿದ್ದ ಲೈಂಗಿಕ ದೌರ್ಜನ್ಯದ ವಿವರಗಳನ್ನು ಬಹಿರಂಗಪಡಿಸುತ್ತಲೇ ಅದರ ಬಗ್ಗೆ ತನಿಖೆ ನಡೆಸಲು ಕೇರಳ ಸರಕಾರ ಎಸ್‌ಐಟಿ ರಚಿಸಿದೆ.

ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದಲ್ಲಿ ರವಿವಾರ ನಡೆದ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹಿರಿಯ ಐಪಿಎಸ್‌ ಅಧಿಕಾರಿ ಸ್ಪರ್ಜನ್‌ ಕುಮಾರ್‌ ಅವರು ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಒಟ್ಟು 7 ಮಂದಿಯ ಈ ಸಮಿತಿಯಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಗಳೂ ಇರಲಿದ್ದಾರೆ ಎಂದು ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

ಮಲಯಾಳಂ ಸಿನಿಮಾ ಉದ್ಯಮದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳನ್ನು ತಡೆಯುವ ಹೇಮಾ ಸಮಿತಿ ವರದಿ ಬಿಡುಗಡೆ ಬೆನ್ನಲ್ಲೇ ಈ ಆರೋಪ ಕೇಳಿಬಂದಿದ್ದು, ರಾಜ್ಯ ಸರ್ಕಾರವನ್ನು ಮುಜಗರಕ್ಕೀಡು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next