Advertisement

ಮೇಲ್ಮನೆಯಲ್ಲಿ ಮಾಲಾಶ್ರೀ-ಉಮಾಶ್ರೀ…ಕನಸಿನ ಕನ್ಯೆಯ ಕನವರಿಕೆ..ಕಾಡಿದ ವಯಸ್ಸೂ..

12:08 AM Dec 16, 2023 | Team Udayavani |

ಬೆಳಗಾವಿ: ಬಿಜೆಪಿಯ ಎಚ್‌.ವಿಶ್ವನಾಥ್‌ ಅವರ ಕನಸಿನಕನ್ಯೆಯ ಕನವರಿಕೆಯು, ಗಂಭೀರವಾಗಿದ್ದ ಮೇಲ್ಮನೆಯನ್ನು ಸ್ವಲ್ಪ ಹೊತ್ತು ನಗೆಯ ಲೋಕಕ್ಕೆ ಕೊಂಡೊಯ್ಯುವುದರ ಜತೆಗೆ ಸ್ವಾರಸ್ಯಕರ ಚರ್ಚೆಗೆ ವೇದಿಕೆಯಾಯಿತು.

Advertisement

ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಗಳಲ್ಲಿ ಪಾರದರ್ಶಕತೆ (ಎರಡನೇ ತಿದ್ದುಪಡಿ) ಮಸೂದೆ ಮೇಲಿನ ಗಂಭೀರ ಚರ್ಚೆಯಲ್ಲಿ ಮಾತಿಗಿಳಿದ ವಿಶ್ವನಾಥ್‌, ಕಾಂಗ್ರೆಸ್‌ ಸದಸ್ಯೆ ಹಾಗೂ ನಟಿ ಉಮಾಶ್ರೀ ಅವರ ಹೆಸರನ್ನು ಮಾಲಾಶ್ರೀ ಎಂದು ಸಂಬೋಧಿಸಿದರು. ಇದು ಇಡೀ ಪ್ರಹಸನಕ್ಕೆ ಶ್ರೀಕಾ ರ ಹಾಡಿತು. ಮಾಲಾಶ್ರೀ ಹೆಸರು ಹೇಳುತ್ತಿದ್ದಂತೆ ಕಾಂಗ್ರೆಸ್‌ನ ನಾಗರಾಜು ಯಾದವ್‌, ಈ ವಯಸ್ಸಿನಲ್ಲಿ ನಿಮಗ್ಯಾಕೆ ಮಾಲಾಶ್ರೀ ನೆನಪಾಯಿತು ಎಂದು ಪ್ರಶ್ನಿಸಿದರು. ಆಗ, ನನ್ನ ವಯಸ್ಸಿಗೂ ಮಾಲಾಶ್ರೀ ನೆನಪಿಗೂ ಸಂಬಂಧ ಇಲ್ಲ ಕುಳಿತ್ಕೊಳಿÅà ಅಂತ ಗದರಿದರು. ಬಿಜೆಪಿಯ ತೇಜಸ್ವಿನಿ ಗೌಡ, ಬಾಲಿವುಡ್‌ನ‌ಲ್ಲಿ ಹೇಮಾಮಾಲಿನಿ ಕನಸಿನಕನ್ಯೆ. ಅದೇ ರೀತಿ, ಆ ದಶಕಗಳಲ್ಲಿ ದಕ್ಷಿಣ ಭಾರತದಲ್ಲಿ ಮಾಲಾಶ್ರೀ ಕನಸಿನಕನ್ಯೆ ಆಗಿದ್ದರು. ಹಾಗಾಗಿ ಹಿರಿಯ ಸದಸ್ಯರು ಅವರನ್ನು ಮೆಲುಕುಹಾಕಿದ್ದಾರೆ. ಅದು ಅವರ ಕಲಾಭಿರುಚಿ ಎಂದು ಹೇಳಿದರು.

ಸಭಾಪತಿ ಬಸವರಾಜ ಹೊರಟ್ಟಿ ಅವರು, ಇರಬಹುದು, ಆದರೆ ಈ ವಯಸ್ಸಿನಲ್ಲಿ ಆ ಕನಸಿನಕನ್ಯೆ ಇವರ ಕನಸಿನಲ್ಲಿ ಯಾಕೆ ಬಂದಳು ಎಂದು ಕೇಳಿದರು. ಇದಕ್ಕೆ ಸಮಜಾಯಿಷಿ ನೀಡಿದ ವಿಶ್ವನಾಥ್‌, ಕಲಾಭಿರುಚಿಯೂ ಒಂದು ರೀತಿ ಹುಣಸೆಹಣ್ಣು ಇದ್ದಂತೆ. ಅದರ ಗುಣ ನಿಮಗೆ ಗೊತ್ತಿಲ್ಲವೇ? ಎಂದು ಕೇಳಿದರು. ಆಗ ಸದನ ನಗೆಗಡಲಲ್ಲಿ ತೇಲಿತು.

ಜೀವಮಾನ ಪ್ರಶಸ್ತಿ ಪ್ರದಾನ ಶೀಘ್ರ
ಕಳೆದೆರಡು ವರ್ಷಗಳಿಂದ ಜೀವಮಾನ ಸಾಧನೆ ಪ್ರಶಸ್ತಿ ಪ್ರಕಟಿಸಲಾಗಿದೆ. ಆದರೆ, ಅದನ್ನು ಪ್ರದಾನಿಸಿಲ್ಲ. ಈ ನಿಟ್ಟಿನಲ್ಲಿ ಶೀಘ್ರ ದೊಡ್ಡ ಕಾರ್ಯಕ್ರಮ ಆಯೋಜಿಸುವ ಮೂಲಕ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು. ಉಮಾಶ್ರೀಗೆ ಕರ್ನಾಟಕ ನಾಟಕ ಅಕಾಡೆಮಿಯಿಂದ ಜೀವಮಾನ ಸಾಧನೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಆದರೆ, ರಾಜಕೀಯ ಕಾರಣಗಳಿಂದ ನೀಡದಿರುವುದು ಸರಿ ಅಲ್ಲ ಎಂದು ವಿಶ್ವನಾಥ್‌ ಗಮನ ಸೆಳೆದರು. ಆಗ ಸಚಿವರು ಈ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next