Advertisement

ಆಯುಷ್‌ ವೈದ್ಯರಿಗೂ ವಿಶೇಷ ಭತ್ಯೆ ನೀಡಿ

09:24 PM Apr 29, 2021 | Team Udayavani |

ಶಿವಮೊಗ್ಗ: ಆಯುಷ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ವಿಶೇಷ ಭತ್ಯೆ ವಿಸ್ತರಿಸಬೇಕೆಂದು ಆಯುಷ್‌ ವೈದ್ಯಾಧಿ ಕಾರಿಗಳ ಸಂಘದ ಜಿಲ್ಲಾಘಟಕ ಮಂಗಳವಾರ ಜಿಲ್ಲಾಧಿ ಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದೆ.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾ ಧಿಕಾರಿಗಳಿಗೆ ಸರಿಸಮಾನ ಭತ್ಯೆ ಮತ್ತುಸ್ಥಾನಮಾನಗಳನ್ನು ಆಯುಷ್‌ ವೈದ್ಯಾಧಿಕಾರಿಗಳಿಗೂ ನೀಡಬೇಕೆಂದು ಸರಕಾರಸಚಿವ ಸಂಪುಟದಲ್ಲಿ ನಿರ್ಣಯ ಮಾಡಿದೆ.

ಕಳೆದ ವರ್ಷ ಆಯುಷ್‌ ವೈದ್ಯಾಧಿಕಾರಿಗಳನ್ನು ಹೊರತುಪಡಿಸಿ ಭತ್ಯೆ ನೀಡಿರುವುದು ಅಸಮಂಜಸವಾಗಿದೆ. ಕೊರೊನಾ ಸಂದರ್ಭದ ಸಂಕಷ್ಟದಲ್ಲಿಆಯುಷ್‌ ವೈದ್ಯರು ಅಲೋಪಥಿ ವೈದ್ಯರಂತೆಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್‌ಕೇರ್‌ ಕೇಂದ್ರ, ತಪಾಸಣಾ ಕೇಂದ್ರ ಸೇರಿದಂತೆಎಲ್ಲಾ ವಿಭಾಗದಲ್ಲಿಯೂ ದಕ್ಷತೆಯಿಂದಕೆಲಸ ಮಾಡುತ್ತಿದ್ದಾರೆ.

ಹೀಗಿರುವಾಗಸೌಲಭ್ಯಗಳ ವಿಚಾರದಲ್ಲಿ ಸರಕಾರ ತಾರತಮ್ಯಮಾಡಿರುವುದು ಸರಿಯಲ್ಲ. ಎಂಬಿಬಿಎಸ್‌ಹಾಗೂ ಬಿಡಿಎಸ್‌ ವೈದ್ಯಾ ಧಿಕಾರಿಗಳಿಗೆವಿಶೇಷ ಭತ್ಯೆ ಪರಿಷ್ಕರಿಸುವ ವೇಳೆ ಆಯುಷ್‌ವೈದ್ಯರ ಸೇವೆಯನ್ನು ನಗಣ್ಯ ಮಾಡಲಾಗಿದೆ.ಈ ಮೂಲಕ ಸರಕಾರ ಆಯುಷ್‌ ವೈದ್ಯರನೈತಿಕ ಸ್ಥೈರ್ಯ ಕುಗ್ಗಿಸುವಂತಿದೆ ಎಂದುಮನವಿಯಲ್ಲಿ ತಿಳಿಸಲಾಗಿದೆ.

ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿಆಯುಷ್‌ ವೈದ್ಯರು ಅಹರ್ನಿಶಿ ಕೆಲಸಮಾಡುತ್ತಿದ್ದಾರೆ. ಸರಕಾರದ ಹಲವುಆದೇಶಗಳನ್ವಯವೇ ಇಲಾಖೆ ಕೆಲಸಮಾಡಿದೆ. ಆದರೆ ಭತ್ಯೆ ಕೊಡುವಾಗಆಯುಷ್‌ ವೈದ್ಯಾಧಿ ಕಾರಿಗಳನ್ನುಕಡೆಗಣಿಸಿರುವುದು ಅತ್ಯಂತ ನೋವಿನಸಂಗತಿ ಎಂದು ಸಂಘ ಹೇಳಿದೆ.

Advertisement

ಹೋರಾಟ ಅನಿವಾರ್ಯ: ಸಂಕಷ್ಟದಸಂದರ್ಭದಲ್ಲಿ ಸರಕಾರದ ಮೇಲೆ ಯಾವುದೇಒತ್ತಡ, ಮುಷ್ಕರ ಇತ್ಯಾದಿ ಮಾರ್ಗಹಿಡಿಯದೆ ಸಮಾಜದ ಸ್ವಾಸ್ಥÂ ಕಾಯುವಲ್ಲಿಆಯುಷ್‌ ವೈದ್ಯರು ತಮ್ಮ ಕಾಯಕಮುಂದುವರಿಸಿದ್ದಾರೆ.

ಸರಕಾರ ಕೂಡಲೇವೈದ್ಯ ಸಮೂಹದಲ್ಲಿ ಭೇದವೆಣಿಸದೆ ಸಮಾನಭತ್ಯೆ ಕೊಡಬೇಕು. ಆಯುಷ್‌ ವೈದ್ಯಾಧಿಕಾರಿಗಳ ನ್ಯಾಯಯುತ ಬೇಡಿಕೆಗಳನ್ನುಹದಿನೈದು ದಿನಗಳಲ್ಲಿ ಈಡೇರಿಸಬೇಕು.ಇಲ್ಲದಿದ್ದಲ್ಲಿ ಸಂಘ ಅನಿವಾರ್ಯವಾಗಿಹೋರಾಟದ ಹಾದಿ ಹಿಡಿಯಬೇಕಾಗುತ್ತದೆಎಂದು ಮನವಿಯಲ್ಲಿ ತಿಳಿಸಲಾಗಿದೆ.ಮನವಿ ಸ್ವೀಕರಿಸಿದ ಎಡಿಸಿ ಅನುರಾಧಅವರು ಮುಂದಿನ ಕ್ರಮಕ್ಕೆ ಸರಕಾರಕ್ಕೆಕಳಿಸಿಕೊಡುವುದಾಗಿ ತಿಳಿಸಿದರು.

ಈ ವೇಳೆ ಸರಕಾರಿ ನೌಕರರ ಸಂಘದಜಂಟಿ ಕಾರ್ಯದರ್ಶಿ ಡಾ.ಸಿ.ಎ.ಹಿರೇಮಠ,ಜಿಲ್ಲಾ ಆಯುಷ್‌ ವೈದ್ಯಾ ಧಿಕಾರಿಗಳ ಸಂಘದಅಧ್ಯಕ್ಷ ಡಾ.ಸತೀಶ್‌ ಆಚಾರ್ಯ ,ರಾಜ್ಯಪ್ರಧಾನ ಕಾರ್ಯದರ್ಶಿ ಡಾ.ಜೆ.ವೀರಣ್ಣ,ಡಾ.ಕುಮಾರ್‌ ಸಾಗರ್‌, ಡಾ.ರವಿರಾಜ್‌,ಡಾ.ಸತೀಶ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next