Advertisement

ಬಿಜೆಪಿ ಗೆಲ್ಲಿಸಿ, ಮೋದಿಯವರನ್ನು ಪ್ರಧಾನಿಯಾಗಿಸಿ: ಪ್ರಭಾಕರ ಪ್ರಭು

04:07 PM Apr 10, 2019 | Team Udayavani |

ಪುಂಜಾಲಕಟ್ಟೆ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರ ಕಳೆದ ಐದು ವರ್ಷದ ಆಡಳಿತಾವಧಿಯಲ್ಲಿ ಅನೇಕ ಜನಪರ ಹಾಗೂ ರಾಷ್ಟ್ರ ರಕ್ಷಣೆಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾದ ನಿಟ್ಟಿನಲ್ಲಿ ಮತ್ತೆ ಮೋದಿ ಅವರನ್ನೇ ಪ್ರಧಾನಿಯನ್ನಾಗಿಸಬೇಕು ಎಂದು ಬಂಟ್ವಾಳ ಬಿಜೆಪಿಯ ಚುನಾವಣಾ ನಿರ್ವಹಣಾ ಸಮಿತಿ ಬೂತ್‌ ಪ್ರಭಾರಿ ಪ್ರಭಾಕರ ಪ್ರಭು ಅವರು ಹೇಳಿದರು.

Advertisement

ಅವರು ರವಿವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರಳ ಗ್ರಾಮದ 31ನೇ ಬೂತ್‌ ವಿಶೇಷ ಸಂಪರ್ಕ ಅಭಿಯಾನದಲ್ಲಿ ಮಾತನಾಡಿದರು.
ಪ್ರಧಾನಿ ಮೋದಿ ಅವರದೂರದೃಷ್ಟಿಯುಳ್ಳ ಯೋಜನೆಯಿಂದಾಗಿ ಭ್ರಷ್ಟಾಚಾರ ರಹಿತ, ಶಾಂತಿಯುತ ಸಮಾಜ ನಿರ್ಮಾಣವಾಗಿದ್ದು, ಜಗತ್ತಿನಲ್ಲಿಯೇ ಇದು ಭಾರತಕ್ಕೆ ಕೀರ್ತಿಯನ್ನು ತಂದುಕೊಟ್ಟಿದೆ ಎಂದು ತಿಳಿಸಿದ ಪ್ರಭು ಅವರು, ಮೋದಿ ಅವರ ಈ ಶಕ್ತಿ ನಮಗೆ ಹೆಮ್ಮೆ ತಂದಿದೆ
ಎಂದರು.

ದ.ಕ. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಮರ್ಥ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಅವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸುವ ನಿಟ್ಟಿನಲ್ಲಿ ಕ್ಷೇತ್ರದ ಪೇಜ್‌ ಪ್ರಮುಖ್‌, ಕಾರ್ಯಕರ್ತರು ಶ್ರಮಿಸಬೇಕು ಎಂದು ಅವರು ತಿಳಿಸಿದರು.

ಪ್ರಮುಖರಾದ ಜಗದೀಶ ಆಳ್ವ,ಲಕ್ಷ್ಮೀಧರ ಶೆಟ್ಟಿ, ಡೊಂಬಯ ಅರಳ,ಪ್ರಸನ್ನ ಕುಮಾರ್‌ಶೆಟ್ಟಿ, ನಾಗೇಶ್‌ ಮಾನ್ಯ, ರಾಜೇಶ್‌ ಮಾನ್ಯ, ಯೋಗೀಶ್‌ ಕುಲಾಲ್‌, ತಿಮ್ಮಪ್ಪ ಪೂಜಾರಿ, ಚಂದ್ರಹಾಸ, ಆಂದ ಮೇಲಾಂಟ, ಸತೀಶ, ಅರುಣ್‌ ಅರಳ
ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next