Advertisement

ದೇಶಸೇವೆಗೆ ನೂರೆಂಟು ವಿಧ : ಕಾಂಚೋಡು

11:55 AM Mar 28, 2017 | Team Udayavani |

ಬೆಳ್ತಂಗಡಿ: ದೇಶಸೇವೆಗೆ ನೂರೆಂಟು ದಾರಿಗಳಿವೆ. ಅದು ಸೇನೆಗೆ ಸೇರುವ ಮೂಲಕ ಇರಬಹುದು ಅಥವಾ ಬೇರೆಯದೇ ವಿವಿಧ ಕ್ಷೇತ್ರಗಳಿರಬಹುದು. ತಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ನಡೆಸಿ ಇತರರಿಗೆ ಮಾದರಿಯಾಗುವುದು ಕೂಡ ದೇಶಕ್ಕೆ ನಾವು ಕೊಡುವ ಕೊಡುಗೆ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಾಂಚೋಡು ಗೋಪಾಲಕೃಷ್ಣ ಭಟ್‌ ಹೇಳಿದರು.

Advertisement

ಅವರು ಕಕ್ಕಿಂಜೆ ಸರಕಾರಿ ಪ್ರೌಢಶಾಲೆಯಲ್ಲಿ  ಎಸೆಸೆಲ್ಸಿ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಉಜಿರೆ ಎಸ್‌ಡಿಎಂ ಡಿಎಡ್‌ ಕಾಲೇಜಿನ ಉಪನ್ಯಾಸಕ ವಿಜಯ ಕುಮಾರ್‌ ಜೀವನದಲ್ಲಿ ತಾಳ್ಮೆ  ಯಾವತ್ತೂ ಕಳೆದುಕೊಳ್ಳಬಾರದು. ನಿನ್ನೆಯ ಬಗ್ಗೆ ಯೋಚನೆ ಬಿಡಿ, ನಾಳೆಯ ಬಗ್ಗೆ ಚಿಂತಿಸಿ ಎಂದರು.

ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್‌ ತೆಲಗಿ ವಹಿಸಿದ್ದರು. ವೇದಿಕೆಯಲ್ಲಿ ನಿಡ್ಲೆ ಶಾಲಾ ಶಿಕ್ಷಕಿ ರೋಸಮ್ಮ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಆನಂದ ಪೂಜಾರಿ,  ಕೃಷ್ಣಪ್ಪ ಪೂಜಾರಿ, ರೇವತಿ, ಕರೀನಾ, ವಾರಿಜಾ ಉಪಸ್ಥಿತರಿದ್ದರು. 
ಹಿಂದಿ ಶಿಕ್ಷಕಿ ಲಕ್ಷ್ಮೀಬಾಯಿ, ಸಮಾಜ ಶಿಕ್ಷಕಿ ಜಯಾ, ಗಣಿತ ಶಿಕ್ಷಕ ರಘು ಟಿ.ಎನ್‌. ಮಾತನಾಡಿದರು.

 ವಿದ್ಯಾರ್ಥಿಗಳಾದ ಇರ್ಷತ್‌ ಮಿಸ್ರಿಯಾ, ಸಾಕಿರಾ, ಹಸೀನಾ, ಹಿತೇಶ್‌, ತಾಹಿರಾ, ತೌಲತ್‌ ಅನಿಸಿಕೆ ವ್ಯಕ್ತಪಡಿಸಿದರು. 
ಶಿಕ್ಷಕಿ ಪ್ರೇಮಲತಾ ವರದಿ ವಾಚಿಸಿದರು. ಅನುಪ್ರಭಾ, ಸುಮಾ ಸ್ವಾಗತಿಸಿದರು. ರುಕಿಯತುಲ್‌ ಅಫೀಜಾ, ಅಸ್ತರಿನಿ ಅವರು ಕಾರ್ಯಕ್ರಮ  ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next