Advertisement

ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ

04:47 PM Oct 11, 2020 | Suhan S |

ತುಮಕೂರು: ಯುವ ಜನರು ಮೊಬೈಲ್‌ಗೆ ಹೆಚ್ಚು ಅಂಟಿಕೊಳ್ಳದೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಆಲಸ್ಯಕ್ಕೆ ಅವಕಾಶವಾಗುವುದಿಲ್ಲ, ಮಾನಸಿಕ ಉಲ್ಲಾಸವಿರುತ್ತದೆ ಎಂದು ಆಪ್ತ ಸಮಾಲೋಚಕ ಸಿ.ಸಿ.ಪಾವಟೆ ಅಭಿಪ್ರಾಯಪಟ್ಟರು.

Advertisement

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ನಗರದ ಅನನ್ಯ ಕಾಲೇಜಿನಲ್ಲಿ ವಿದ್ಯಾರ್ಥಿ, ಯುವಜನರಿಗಾಗಿ ಆಯೋಜಿಸಿದ್ದಮಾನಸಿಕ ಆರೋಗ್ಯ ಕುರಿತ ಆನ್‌ಲೈನ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾನಸಿಕ ಆರೋಗ್ಯಕ್ಕೆ ಮಹತ ನೀಡಿ: ಪ್ರತಿವ್ಯಕ್ತಿಯ ದೇಹಕ್ಕೂ ಮನಸ್ಸಿಗೂ ನೇರ ಸಂಬಂಧವಿದ್ದು, ದೈಹಿಕ ಆರೋಗ್ಯಕ್ಕೆ ನೀಡುವ ಮಹತ್ವವನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕಾಗಿದೆ. ಆದರೆ ಬಹಳಷ್ಟು ಜನ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಾ ಮಾನಸಿಕ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂದರು.

ಅಪಾಯ ಎದುರಾಗುವ ಸಂಭTವ: ಮಾನಸಿಕವಾಗಿ ನಾವು ಆರೋಗ್ಯವಾಗಿ ಇರಬೇಕಾದ ಕೆಲವೊಂದು ಸೂಕ್ಷ್ಮತೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೈಹಿಕವಾಗಿ ಚೆನ್ನಾಗಿದೆ ಎಂದು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನ‌ಗ‌ಳಲ್ಲಿ ಅಪಾಯ ಎದುರಾಗುವ ಸಂಭವ ಇರುತ್ತದೆ ಎಂದು ಎಚ್ಚರಿಸಿದರು. ಮನುಷ್ಯನಿಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ನಿದ್ರೆ ಮತ್ತು ಆಹಾರ ತುಂಬಾ ಮುಖ್ಯವಾಗಿ ಇರಬೇಕು. ಈ ಎರಡೂ ವಿಷಯದಲ್ಲಿ ಪ್ರಧಾನ್ಯತೆ ನೀಡಬೇಕು. ಬಹಳಷ್ಟು ವಿದ್ಯಾರ್ಥಿಗಳು ನಿದ್ರೆಯ ಕಡೆಗೆ ಗಮನ ಹರಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲ, ಸಿಕ್ಕಿದ ಆಹಾರವನ್ನೆಲ್ಲಾ ತಿನ್ನಲು ಮನಸ್ಸು ಹಾತೊರೆಯುತ್ತದೆ. ಈ ಮನಸ್ಸಿಗೆ ಕಡಿವಾಣ ಹಾಕದೆ ಹೋದರೆ ದೈಹಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ನುಡಿದರು.

ಮೌಡ್ಯಕ್ಕೆ ಆಸ್ಪದ ನೀಡಬೇಡಿ: ಕೆಲವು ಸಿನಿಮಾಗಳು ಹಾಗೂ ಧಾರಾವಾಹಿಗಳಲ್ಲಿ ದೆವ್ವ ಮತ್ತಿತರ ಚಿತ್ರಗಳನ್ನು ತೋರಿಸುವುದರಿಂದ ಯುವ ಜನತೆಯ ಮೇಲೆ ಇವು ಕೆಟ್ಟ ಪರಿಣಾಮ ಬೀರುತ್ತವೆ. ಕನಸಿನಲ್ಲಿಯೂ ಅದೇ ಬರುತ್ತದೆ. ಪೋಷಕರು ಮಂತ್ರ ಹಾಕಿಸುವ, ಪೂಜೆ ಮಾಡಿಸಿ ದೆವ್ವ ಬಿಡಿಸುವ ಮಟ್ಟಕ್ಕೆ ಹೋಗುತ್ತಾರೆ. ಇಂತಹ ಮೌಡ್ಯ ಭಾವನೆ ಗಳಿಗೆ ಹೆಚ್ಚು ಆಸ್ಪದ ನೀಡಬಾರದು ಎಂದರು.

Advertisement

ಆರೋಗ್ಯವೂ ವೃದ್ಧಿ: ತುಮಕೂರು ನಗರ ಸಾಂತ್ವನ ಕೇಂದ್ರದ ಸಲಹೆಗಾರ ಸಾ.ಚಿ.ರಾಜಕುಮಾರ ಮಾತನಾಡಿ, ಕೋವಿಡ್‌ನ‌ ಈ ಸೂಕ್ಷ್ಮ ಸಂದರ್ಭದಲ್ಲಿ ವಿದ್ಯಾರ್ಥಿ ಯುವಜನರ ಜವಾಬ್ದಾರಿ ಕುಟುಂಬಗಳಲ್ಲಿ ಹೆಚ್ಚಿನದಿದೆ. ಹಿಂದೆಲ್ಲಾ ಅವಶ್ಯಕ ಮತ್ತು ಅನಾವಶ್ಯಕ ಎಂದು ಯೋಚಿಸದೆ ಹಣ ಖರ್ಚು ಮಾಡುವವರಿದ್ದರು. ಈಗ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿರುವುದರಿಂದ ಯಾವುದೇವಸ್ತುಗಳನ್ನು ಕೊಳ್ಳುವ ಮುನ್ನ ಒಮ್ಮೆಯೋಚಿಸಬೇಕು. ಪೋಷಕರೊಂದಿಗೆಮಾತನಾಡಬೇಕು. ಪರಸ್ಪರ ಕೌಟುಂಬಿಕ ವಾತಾವರಣದಲ್ಲಿ ಕುಳಿತು ಮಾತನಾಡುವ ಪ್ರವೃತ್ತಿ ಹೆಚ್ಚಾದಂತೆಲ್ಲಾ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ವರಾನ ಗ್ಲೋಬಲ್‌ ಟ್ರಸ್ಟಿ ಎಚ್‌.ಹರೀಶ್‌, ಅನನ್ಯ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವಾಸ್‌, ಕಾಮರ್ಸ್‌ ವಿಭಾಗದ ಮುಖ್ಯಸ್ಥರಾದ ದೇವಕಿ ಪ್ರಸಾದ್‌, ಎನ್‌.ಜೆ. ಯತೀಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next